ಶಿರ್ವ : ವ್ಯಕ್ತಿ ನಾಪತ್ತೆ – vishwanews24
ಶಿರ್ವ : ವ್ಯಕ್ತಿ ನಾಪತ್ತೆ
ಶಿರ್ವ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ಕಾಲು ಗ್ರಾಮದ ಬೀಜಂಟ್ಲ ನಿವಾಸಿ ಮನೋಜ್(39) ಅವರು ಡಿ. 18 ರಂದು ಬೆಳಗ್ಗೆ ಮನೆಯಿಂದ ರೂ.500 ಹಣ ಪಡೆದುಕೊಂಡು ಕಟಪಾಡಿಗೆ ಹೋಗಿ ಬರುತ್ತೇನೆಂದು ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಅವರ ಇರುವಿಕೆಯ ಬಗ್ಗೆ ನೆರೆಕರೆಯವರಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಈವರೆಗೆ ಪತ್ತೆಯಾಗಿರುವುದಿಲ್ಲ. ಅವರ ಪತ್ನಿ ಸುನೀತ ಕುಲಾಲ್ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೀಮ್ ಇಂಡಿಯಾಗೆ ಆಯ್ಕೆಯಾದ ಉಡುಪಿಯ ಕಾಪು ಮೂಲದ ತನುಷ್ ಕೋಟ್ಯಾನ್ – vishwanews24
