ಶೈಕ್ಷಣಿಕ ಹಾಗೂ ಔದ್ಯೋಗಿಕ ಸಮಸ್ಯೆಗಳಿಗೆ ಎನ್.ಡಿ.ಎ ಅಭ್ಯರ್ಥಿಗಳ ಗೆಲುವೇ ಪರಿಹಾರ – vishwanews24
“ಶೈಕ್ಷಣಿಕ ಹಾಗೂ ಔದ್ಯೋಗಿಕ ಸಮಸ್ಯೆಗಳಿಗೆ ಎನ್.ಡಿ.ಎ ಅಭ್ಯರ್ಥಿಗಳ ಗೆಲುವೇ ಪರಿಹಾರ”
ತೀರ್ಥಹಳ್ಳಿಯಲ್ಲಿಂದು ವಿಧಾನ ಪರಿಷತ್ ಚುನಾವಣೆಯ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಾಯಿತು. ಜನ ಸೇವೆಯಲ್ಲಿ ತೊಡಗಿಕೊಂಡು ನಿರಂತರ ಸೇವೆಗೈಯ್ಯುತ್ತಿರುವ ನಮ್ಮ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಶ್ರೀ ಎಸ್ ಎಲ್ ಭೋಜೇಗೌಡ, ಪದವೀಧರರ ಕ್ಷೇತ್ರದ ಅಭ್ಯರ್ಥಿ ಶ್ರೀ ಧನಂಜಯ ಸರ್ಜಿ ಅವರುಗಳಿಗೆ ಶಿಕ್ಷಕರು ಹಾಗೂ ಪದವೀಧರರು ಪ್ರಥಮ ಪ್ರಾಶಸ್ತ್ಯತದ ಮತವನ್ನು ನೀಡಿ ಬೆಂಬಲಿಸಬೇಕೆಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಶ್ರೀ @JnanendraAraga, ಜಿಲ್ಲಾಧ್ಯಕ್ಷರಾದ ಶ್ರೀ ಟಿ ಡಿ ಮೇಘರಾಜ್, ಪದವೀಧರರ ಕ್ಷೇತ್ರದ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿ ಶ್ರೀ ಧನಂಜಯ ಸರ್ಜಿ ಸೇರಿದಂತೆ ಸ್ಥಳೀಯ ಮುಖಂಡರು, ಶಿಕ್ಷಕರು ಹಾಗೂ ಪದವೀಧರ ಮತದಾರರು ಉಪಸ್ಥಿತರಿದ್ದರು.

