ಸಚಿವ ಪಿ. ಚಿದಂಬರಂ ಬಂಧನ ಭೀತಿ : ಕೇಂದ್ರ ಸರಕಾರ ಚಿದಂಬರಂ ಅವರ ಚಾರಿತ್ರ್ಯ ವಧೆ ಮಾಡಲು ಬಳಸುತ್ತಿದೆ : ರಾಹುಲ್‌ ಗಾಂಧಿ ಟ್ವೀಟ್‌ -Vishwanews24

Featured, ರಾಷ್ಟ್ರ ನ್ಯೂಸ್

ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಮತ್ತು ಏರ್‌ಸೆಲ್‌-ಮ್ಯಾಕ್ಸಿಸ್‌ ಪ್ರಕರಣಗಳಿಗೆ ಸಂಬಂಧಿಸಿ ಬಂಧನ ಭೀತಿ ಎದುರಿಸುತ್ತಿರುವ ಕೇಂದ್ರ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ನಲ್ಲಿ ಕೆವಿಯಟ್‌ ಸಲ್ಲಿಕೆ ಮಾಡಿವೆ.

ಪಿ. ಚಿದಂಬರಂ ಬಂಧನದಿಂದ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಇಂದು ವಿಚಾರಣೆ ನಡೆದು ತೀರ್ಪು ಹೊರಬೀಳಲಿದೆ. ಆದರೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಕೆವಿಯಟ್‌ ಸಲ್ಲಿಕೆ ಮಾಡಿರುವುದರಿಂದ ಪಿ. ಚಿದಂಬರಂ ಕೋರ್ಟ್‌ಗೆ ಹಾಜರಾಗದೆ ಸುಪ್ರೀಂ ತೀರ್ಪು ಪ್ರಕಟಿಸುವಂತಿಲ್ಲ.

ಅಜ್ಞಾತಸ್ಥಳದಲ್ಲಿರುವ ಪಿ. ಚಿದಂಬರಂ ಸುಪ್ರೀ ಕೋರ್ಟ್‌ಗೆ ಹಾಜರಾಗುವಂತೆ ಮಾಡಲು ಕೆವಿಯಟ್‌ ಅಸ್ತ್ರ ಉಪಯೋಗಿಸಿವೆ. ಈ ಕುರಿತು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದು, ಕೇಂದ್ರ ಸರಕಾರ ಇಡಿ ಮತ್ತು ಸಿಬಿಐಗಳನ್ನು ಚಿದಂಬರಂ ಅವರ ಚಾರಿತ್ರ್ಯ ವಧೆ ಮಾಡಲು ಬಳಸುತ್ತಿದೆ. ಅಧಿಕಾರವನ್ನು ದುರ್ಬಳಕೆ ಮಾಡುವುದನ್ನು ವಿರೋಧಿಸುತ್ತೇನೆ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.