ಬೆಂಗಳೂರು: ಜನರ ಭಾವನೆಗಳಿಗೆ ಸರ್ಕಾರದ ಸ್ಪಂದನೆ ಇಲ್ಲದ ಕಾರಣ ಜನರ ದಿಕ್ಕು ತಪ್ಪಿಸಲು ಲವ್ ಜಿಹಾದ್, ಗೋ ಹತ್ಯೆ ಕಾಯ್ದೆ ಜಾರಿಗೆ ಮುಂದಾಗಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಕ್ಕಳ ಶಿಕ್ಷಣ, ಬರ ಪರಿಹಾರ ಅತಿವೃಷ್ಟಿ, ಉದ್ಯೋಗ ಸೃಷ್ಟಿ ಇಲ್ಲ. ರಾಜ್ಯ ಸರ್ಕಾರ ಎಲ್ಲಾ ವಿಚಾರದಲ್ಲಿ ವಿಫಲವಾಗಿದೆ. ಗೋಹತ್ಯೆ ನಿಷೇಧ ಬದಲಾಗಿ ಗೋ ಮಾರಾಟ ನಿಷೇಧ ಕಾಯ್ದೆಯನ್ನು ಏಕೆ ಜಾರಿಗೆ ತರುವುದಿಲ್ಲ. ರೈತರು ಮುದಿ, ಪ್ರಯೋಜನಕ್ಕೆ ಬಾರದ ದನವನ್ನು ಮಾರಾಟ ಮಾಡುತ್ತಾರೆ. ಮನೆಯವರನ್ನು ನೋಡಿಕೊಂಡಂತೆ ಗೋವನ್ನು ನೋಡಿಕೊಳ್ಳಲಿ. ಸತ್ತಾಗ ಗೌರವಯುತ ಅಂತ್ಯಸಂಸ್ಕಾರ ನಡೆಸಲಿ ಎಂದು ಖಾದರ್ ಹೇಳಿದರು.
ಸರ್ಕಾರಕ್ಕೆ ಗೋವಿನ ಬಗ್ಗೆ ಕಾಳಜಿ ಇದ್ದರೆ ಇಂತಹ ಕಾನೂನು ಜಾರಿಗೊಳಿಸಲಿ ಎಂದ ಅವರು, ರೈತರ ವಿರೋಧಿ ಕಾನೂನು ಜಾರಿಗೆ ತರುವಾಗ ಈ ರೀತಿ ಚರ್ಚೆ ನಡೆದಿದ್ಯಾ? ಭೂ ಸುಧಾರಣಾ ಕಾಯ್ದೆ ಏಕೆ ಇಷ್ಟು ಚರ್ಚೆ ಮಾತನಾಡಿಲ್ಲ? ಆದರೆ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಇಷ್ಟು ಚರ್ಚೆ ಏಕೆ ಎಂದು ಪ್ರಶ್ನಿಸಿದರು. ಇನ್ನು ಗೋಹತ್ಯೆ ಕಾನೂನು ಇಂದಿರಾ ಗಾಂಧಿ ಕಾಲದಲ್ಲಿ ಜಾರಿಗೊಳಿಸಲಾಗಿದೆ ಎಂದ ಅವರು, ಕೇರಳ, ಮಿಜೊರಾಂ ಗೋವಾದಲ್ಲಿ ಗೋ ತಿನ್ನಬಹುದು. ನಿಜವಾದ ಕಾಳಜಿ ಇವರಲ್ಲಿ ಇದ್ದರೆ ದೇಶದಾದ್ಯಂತ ಏಕೆ ಕಾಯ್ದೆ ಜಾರಿಗೆ ತರಲ್ಲ ಎಂದು ಪ್ರಶ್ನಿಸಿದರು.
ಇನ್ನು ಮತಾಂತರ ಕಾಯ್ದೆ ಇರುವುದನ್ನು ಬಲಗೊಳಿಸಲಿ ಎಂದ ಖಾದರ್, ಅದರಲ್ಲಿ ಅರೇಬಿಕ್ ಪದ ಜಿಹಾದ್ ಬಳಕೆ ಏಕೆ? ಕಾನೂನಿನಲ್ಲಿ ಏನಿದೆ ಎಂಬುವುದನ್ನು ಸಾರ್ವಜನಿಕರಿಗೆ ಮಾಹಿತಿ ನೀಡಿ. ನಮ್ಮ ವಿರುದ್ಧ ರಾಜಕೀಯ ದುರುದ್ದೇಶ ಇದ್ದರೆ ಮಸೂದೆಯಲ್ಲಿ ಏನಿದೆ ನೋಡಿ ಪಕ್ಷ ಮುಂದಿನ ಹೆಜ್ಜೆ ಇಡಲಿದೆ ಎಂದರು. ಅಲ್ಲದೇ ಸಮಾಜ ಹಾಗೂ ದೇಶಕ್ಕೆ ಮಾರಕವಾದ ಕಾನೂನು ವಿರುದ್ಧ ನಮ್ಮ ಹೋರಾಟ ಎಂದರು.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…