ಸಹಕಾರ ಭಾರತಿ, ಕಾಪು ತಾಲೂಕು ಮಟ್ಟದ ಅಭ್ಯಾಸ ವರ್ಗ ಉದ್ಘಾಟನೆ: vishwanews24
ಸಹಕಾರ ಭಾರತಿ, ಕಾಪು ತಾಲೂಕು ಮಟ್ಟದ ಅಭ್ಯಾಸ ವರ್ಗ ಉದ್ಘಾಟನೆ: vishwanews24
ಕಾಪು: ಸಹಕಾರ ಭಾರತಿ, ಕಾಪು ತಾಲೂಕು ಮಟ್ಟದ ಅಭ್ಯಾಸ ವರ್ಗ ಉದ್ಘಾಟನಾ ಕಾರ್ಯಕ್ರಮ ಹೊಟೇಲ್ ಮಂದಾರ, ಸೀತಾಪದ ಕನ್ವೇಷನ್ ಹಾಲ್ ಕಾಪುವಿನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು CA ಜೀವನ್ ಕುಮಾರ್ ಶೆಟ್ಟಿ ನೆರವೇರಿಸಿ ಸಹಕಾರಿ ರಂಗಕ್ಕೆ ವಿಧಿಸುವ ತೆರಿಗೆ ವಿಚಾರವಾಗಿ ಸಹಕಾರ ಭಾರತಿ ಹೋರಾಟ ಮಾಡುವ ಅಗತ್ಯವಿದೆ ಮತ್ತು ಸಂಘದ ಸದಸ್ಯರಾದವರು ವಾರ್ಷಿಕ ಮಹಾಸಭೆಗೆ ಹಾಜರಾಗುವ ಬಗ್ಗೆ ಮನವರಿಕೆ ಮಾಡಬೇಕು ಮತ್ತು ಸರಕಾರಿ ಶಾಲೆಯ ಬದಲು ಸಹಕಾರಿ ಶಾಲೆಗಳು ಆರಂಭವಾಗಬೇಕು ಎಂದರು.
ಉಡುಪಿ ಜಿಲ್ಲಾ ಸಹಕಾರ ಭಾರತಿಯ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು
ಶ್ರೀ ಗಂಗಾಧರ ಸುವರ್ಣ ಅಧ್ಯಕ್ಷರು, ಸಹಕಾರ ಭಾರತಿ, ಕಾಪು ತಾಲೂಕು) , ಮುರಲೀಧರ ಪೈ (ಉಪಾಧ್ಯಕ್ಷರು, ಸಹಕಾರ ಭಾರತಿ, ಉಡುಪಿ,ಸುಧಾಮ ಶೆಟ್ಟಿ ಮಲ್ಲಾರು ಉಪಸ್ಥಿತರಿದ್ದರು.
ಕೇಶವ ಮೊಯಿಲಿ ಕಾರ್ಯಕ್ರಮ ನಿರೂಪಿಸಿ ಚಂದ್ರಶೇಖರ ವಂದಿಸಿದರು.
