ಕಾಪು: ಕಾಪು ಲಾಕ್ಡೌನ್ ಮುಂದುವರಿಕೆಯ ಹಿನ್ನೆಲೆಯಲ್ಲಿ ಕಾಪು ಮೀನುಮಾರುಕಟ್ಟೆ ಹಾಗೂ ಮಾರ್ಕೆಟ್ ಭಾಗದಲ್ಲಿ ಸಾಮಾಜಿಕ ಅಂತರ ಉಲ್ಲಂಘನೆಯಾಗುತ್ತಿದ್ದು ಈ ಬಗ್ಗೆ ಆದಿತ್ಯವಾರ ಭೇಟಿ ನೀಡಿದ ಉಡುಪಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಾರ್ಕೆಟ್ನಲ್ಲಿ ಸರಿಯಾದ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ನಡೆಯುತ್ತಿಲ್ಲ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನದ ಪ್ರಕಾರ ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ ಮತ್ತು ಕಾಪು ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಅವರ ಜಂಟಿ ಕಾರ್ಯಾಚರಣೆಯಲ್ಲಿ ನಡೆಸಿ ಮೀನು ಮಾರಾಟಗಾರರಿಗೆ ಹಾಗೂ ಮಾಂಸದಂಗಡಿ ಮತ್ತು ಮಾರ್ಕೆಟ್ ಒಳಭಾಗದಲ್ಲಿ ಕಾರ್ಯಾಚರಣೆ ಮಾಡುವ ಅಗತ್ಯ ವಸ್ತುಗಳ ಅಂಗಡಿ ಮಾಲಕರಿಗೆ ಎಚ್ಚರಿಕೆ ನೀಡಿ ಸಾಮಾಜಿಕ ಅಂತರ ಮತ್ತು ಜನರನ್ನು ಗುಂಪು ಸೇರಿಸಿ ವ್ಯಾಪಾರ ಮಾಡುತ್ತಿರುವವರ ಮೇಲೆ ಕೇಸ್ ದಾಖಲಿಸಲಾಗುವುದು ಎಂದರು.
ಹಾಗೂ ತರಕಾರಿ ಹಾಗೂ ದಿನಸಿ ಅಂಗಡಿಗಳ ಮಾಲಕರು ಗ್ರಾಹಕರು ನಡೆಯಲು ಬಳಸುವ ಫುಟ್ಪಾತ್ ಮೇಲೆ ಅಳವಡಿಸಿರುವ ಎಲ್ಲಾ ಟೇಬಲ್ ತೆರವುಗೊಳಿಸಿ ಸುಗಮ ವ್ಯಾಪಾರ ಮಾಡಬೇಕೆಂದು ಆದೇಶ ಮಾಡಿದರು,ಕೇವಲ ಒಂದು ದಿನದ ಅವಕಾಶವನ್ನು ನೀಡಿ ಕಾನೂನು ಮೀರಿ ವರ್ತಿಸಿದ್ದಲ್ಲಿ ಮುಂದಿನ 15 ದಿನದವರೆಗೆ ಕಾಪು ಮಾರ್ಕೆಟ್ ಅನ್ನು ಬಂದ್ ಮಾಡುವುದಾಗಿ ತಾಕೀತು ಮಾಡಿದರು.
ಕಾಪು ಮಾರ್ಕೆಟ್ ನಲ್ಲಿ ಸುಂಕ ವಸೂಲಿ ಮಾಡುವವ ಈ ಭಾಗದಲ್ಲಿ ಗೊಂದಲ ಹಾಗೂ ಕಾನೂನು ಉಲ್ಲಂಘನೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳವುದು ಜವಾಬ್ದಾರಿಯಾಗಿದೆ ಸಾಮಾಜಿಕ ಅಂತರ ಮತ್ತು ಹತ್ತು ಗಂಟೆಯ ಒಳಗೆ ಇಡೀ ಮಾರ್ಕೆಟ್ ಬಂದ್ ಆಗದೇ ಇದ್ದಲ್ಲಿ ಸುಂಕ ವಸೂಲಿಗಾರನ ಮೇಲೆ ಕೇಸ್ ದಾಖಲಿಸಲಾಗುವುದಾಗಿ ಎಚ್ಚರಿಕೆ ನೀಡಿದರು.
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…
ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು…
ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ…