ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ಮಾಡಿ ಇಲ್ಲಾಂದ್ರೆ ಕಾಪು ಮಾರ್ಕೆಟ್ ಬಂದ್: ಮುಖ್ಯಾಧಿಕಾರಿ ಖಡಕ್ ವಾರ್ನಿಂಗ್: vishwanews24
ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ಮಾಡಿ ಇಲ್ಲಾಂದ್ರೆ ಕಾಪು ಮಾರ್ಕೆಟ್ ಬಂದ್: ಮುಖ್ಯಾಧಿಕಾರಿ ಖಡಕ್ ವಾರ್ನಿಂಗ್
ಕಾಪು: ಕಾಪು ಲಾಕ್ಡೌನ್ ಮುಂದುವರಿಕೆಯ ಹಿನ್ನೆಲೆಯಲ್ಲಿ ಕಾಪು ಮೀನುಮಾರುಕಟ್ಟೆ ಹಾಗೂ ಮಾರ್ಕೆಟ್ ಭಾಗದಲ್ಲಿ ಸಾಮಾಜಿಕ ಅಂತರ ಉಲ್ಲಂಘನೆಯಾಗುತ್ತಿದ್ದು ಈ ಬಗ್ಗೆ ಆದಿತ್ಯವಾರ ಭೇಟಿ ನೀಡಿದ ಉಡುಪಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಾರ್ಕೆಟ್ನಲ್ಲಿ ಸರಿಯಾದ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ನಡೆಯುತ್ತಿಲ್ಲ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನದ ಪ್ರಕಾರ ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ ಮತ್ತು ಕಾಪು ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಅವರ ಜಂಟಿ ಕಾರ್ಯಾಚರಣೆಯಲ್ಲಿ ನಡೆಸಿ ಮೀನು ಮಾರಾಟಗಾರರಿಗೆ ಹಾಗೂ ಮಾಂಸದಂಗಡಿ ಮತ್ತು ಮಾರ್ಕೆಟ್ ಒಳಭಾಗದಲ್ಲಿ ಕಾರ್ಯಾಚರಣೆ ಮಾಡುವ ಅಗತ್ಯ ವಸ್ತುಗಳ ಅಂಗಡಿ ಮಾಲಕರಿಗೆ ಎಚ್ಚರಿಕೆ ನೀಡಿ ಸಾಮಾಜಿಕ ಅಂತರ ಮತ್ತು ಜನರನ್ನು ಗುಂಪು ಸೇರಿಸಿ ವ್ಯಾಪಾರ ಮಾಡುತ್ತಿರುವವರ ಮೇಲೆ ಕೇಸ್ ದಾಖಲಿಸಲಾಗುವುದು ಎಂದರು.
ಹಾಗೂ ತರಕಾರಿ ಹಾಗೂ ದಿನಸಿ ಅಂಗಡಿಗಳ ಮಾಲಕರು ಗ್ರಾಹಕರು ನಡೆಯಲು ಬಳಸುವ ಫುಟ್ಪಾತ್ ಮೇಲೆ ಅಳವಡಿಸಿರುವ ಎಲ್ಲಾ ಟೇಬಲ್ ತೆರವುಗೊಳಿಸಿ ಸುಗಮ ವ್ಯಾಪಾರ ಮಾಡಬೇಕೆಂದು ಆದೇಶ ಮಾಡಿದರು,ಕೇವಲ ಒಂದು ದಿನದ ಅವಕಾಶವನ್ನು ನೀಡಿ ಕಾನೂನು ಮೀರಿ ವರ್ತಿಸಿದ್ದಲ್ಲಿ ಮುಂದಿನ 15 ದಿನದವರೆಗೆ ಕಾಪು ಮಾರ್ಕೆಟ್ ಅನ್ನು ಬಂದ್ ಮಾಡುವುದಾಗಿ ತಾಕೀತು ಮಾಡಿದರು.
ಸುಂಕ ವಸೂಲಿಗಾರನಿಗೆ ಲಾಸ್ಟ್ ವಾರ್ನಿಂಗ್ ಇಲ್ಲಾಂದ್ರೇ ಕೇಸ್ ಫಿಕ್ಸ್
ಕಾಪು ಮಾರ್ಕೆಟ್ ನಲ್ಲಿ ಸುಂಕ ವಸೂಲಿ ಮಾಡುವವ ಈ ಭಾಗದಲ್ಲಿ ಗೊಂದಲ ಹಾಗೂ ಕಾನೂನು ಉಲ್ಲಂಘನೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳವುದು ಜವಾಬ್ದಾರಿಯಾಗಿದೆ ಸಾಮಾಜಿಕ ಅಂತರ ಮತ್ತು ಹತ್ತು ಗಂಟೆಯ ಒಳಗೆ ಇಡೀ ಮಾರ್ಕೆಟ್ ಬಂದ್ ಆಗದೇ ಇದ್ದಲ್ಲಿ ಸುಂಕ ವಸೂಲಿಗಾರನ ಮೇಲೆ ಕೇಸ್ ದಾಖಲಿಸಲಾಗುವುದಾಗಿ ಎಚ್ಚರಿಕೆ ನೀಡಿದರು.
