ಸುರತ್ಕಲ್: ಗುಜರಿ ಗೋದಾಮಿನಲ್ಲಿ ಬೆಂಕಿ ಅವಘಡ: ತಪ್ಪಿದ ದುರಂತ – Vishwanews24

Featured, ದಕ್ಷಿಣ ಕನ್ನಡ

ಸುರತ್ಕಲ್: ಗುಜರಿ ಗೋದಾಮಿನಲ್ಲಿ ಬೆಂಕಿ ಅವಘಡ: ತಪ್ಪಿದ ಭಾರೀ ದುರಂತ

ಸುರತ್ಕಲ್ : ರಾಶಿ ಹಾಕಲಾದ ನಿರುಪಯುಕ್ತ ಕೆಮಿಕಲ್ ಗೆ ಬೆಂಕಿ ಹಿಡಿದ ಘಟನೆ ಗುರುವಾರ ಕಟ್ಲ ಕ್ರಾಸ್ ಬಳಿಕ ಗುಜರಿ ಗೋದಾಮಿನಲ್ಲಿ ಸಂಭವಿಸಿದೆ.

ಖಾಸಗೀ ಜಾಗದಲ್ಲಿ ಬಡಾವಣೆಯ ನಡುವೆ ಅಳಿದುಳಿದ ಕೆಮಿಕಲ್ ಡ್ರಮ್ ಹಾಗೂ ಮತ್ತಿತರ ಗುಜರಿ ಸಾಮಾನು ತಂದು ಇಲ್ಲಿ ಒಡೆಯುವ ಕೆಲಸ ಮಾಡಲಾಗುತ್ತಿದೆ. ಬಡಾವಣೆಯ ಮಂದಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಪಾಲಿಕೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.ಕೆಮಿಕಲ್ ಹುಡಿಗಳು ಹಾರಿ ಬಂದು ಮನೆಯೊಳಗೆ ಮಲಿನವಾಗುತ್ತಿದೆ. ಯಾರ್ಡ್ ನಲ್ಲಿ ನೀರು ನಿಂತು ಸೊಳ್ಳೆ ಕಾಟ ಹೆಚ್ಚಾಗಿದೆ.

ಇಂದು ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ ಈ ವೇಳೆ ಸುತ್ತ ಮುತ್ತ ಇದ್ದ ಅಪಾರ್ಟ್ ಮೆಂಟ್ ಹಾಗೂ ಮನೆ ಮಂದಿ ಹೊರ ಬಂದು ಬೆಂಕಿ ಆರಿಸುವಲ್ಲಿ ಶ್ರಮಿಸಿದರು.

ಕರಾವಳಿಯ ಮೂರು ದೇವಾಲಯಗಳ ಸ್ಪೋಟಕ್ಕೆ ಉಗ್ರರ ಸ್ಕೆಚ್..ಮಂಗಳೂರಿನಲ್ಲಿ ಹೈ ಅಲರ್ಟ್ ; ತೀವ್ರ ತಪಾಸಣೆ – Vishwanews24

ಇದೀಗ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿದ್ದು ಅಪಾರ್ಟ್ಮೆಂಟ್ ಒಳಗೆ ತುಂಬಾ ಹೊಗೆ ತುಂಬಿ ಮನೆಯಿಂದ ಹೊರಬರಬೇಕಾಯಿತು.

 

Leave a Reply