ಸುರತ್ಕಲ್ : ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಆಪದ್ಭಾಂದವ ಆಸೀಫ್‌ ಹಲ್ಲೆ ಪ್ರಕರಣ: 6 ಮಂಗಳಮುಖಿಯರು ಅರೆಸ್ಟ್‌ – Vishwanews24

Featured, ದಕ್ಷಿಣ ಕನ್ನಡ

ಸುರತ್ಕಲ್ : ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಆಪದ್ಭಾಂದವ ಆಸೀಫ್‌ ಹಲ್ಲೆ ಪ್ರಕರಣ: 6 ಮಂಗಳಮುಖಿಯರು ಅರೆಸ್ಟ್‌ – Vishwanews24

ಸುರತ್ಕಲ್: ಎನ್.ಐ.ಟಿ.ಕೆ. ಬಳಿಯಿರುವ ಟೋಲ್‍ ಗೇಟ್ ವಿರುದ್ಧ ಕಳೆದ ಕೆಲ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಆಸಿಫ್‍ ಆಪತ್ಬಾಂಧವ ಅವರ ಮೇಲೆ ಹಲ್ಲೆ ನಡೆಸಿದ 6 ಮಂಗಳಮುಖಿಯರನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವಾಸವಿ ಗೌಡ(32), ಲಿಪಿಕಾ (19), ಹಿಮಾ (24), ಆದ್ಯ (22), ಮಾಯಾ (28) ಮತ್ತು ಮೈತ್ರಿ (28) ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ 12:30ರ ಸುಮಾರಿಗೆ ಮೊದಲಿಗೆ ಇಬ್ಬರು ಮಂಗಳಮುಖಿಯರು ಆಗಮಿಸಿ ಹಲ್ಲೆಗೆ ಯತ್ನಿಸಿದ್ದರು.ಬಳಿಕ ಸುಮಾರು 10 ಮಂದಿಯಷ್ಟಿದ್ದ ಮಂಗಳಮುಖಿಯರ ತಂಡ ಆಗಮಿಸಿ ಧರಣಿ ನಿರತರನ್ನು ಅವಾಚ್ಯವಾಗಿ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಹಲ್ಲೆಗೂ ಯತ್ನಿಸಿದೆ ಎಂದು ಆರೋಪಿಸಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು ಆರು ಮಂದಿ ಮಂಗಳಮುಖಿಯರನ್ನು ಬಂಧಿಸಿದ್ದಾರೆ. ಸುರತ್ಕಲ್‌ ಠಾಣೇಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ : ಪ್ರಾಣ ಆದ್ರೂ ಹೋಗ್ಲಿ, ಹಿಜಾಬ್ ತೆಗೆಯಲ್ಲ , ನಾವು ಸತ್ತರೆ ಹಿಜಾಬ್ನಲ್ಲೇ ಸಾಯುತ್ತೇವೆ : ಮುಸ್ಲಿಂ ವಿದ್ಯಾರ್ಥಿನಿಯರು  – Vishwanews24

 

Leave a Reply