ರಾಜ್ಯ ನ್ಯೂಸ್

ಸೆಲ್ಫಿಯಿಂದ ಕಳವಾಗಲಿದೆ ನಿಮ್ಮ ದುಡ್ಡು, ಡಿಐಜಿ ರೂಪಾ ಮೇಡಮ್ ನೀಡಿದ್ರು ಕಡಕ್ ಎಚ್ಚರಿಕೆ, ಏನು ಅಂತಾ ನೀವೆ ಓದಿ..!

ಸೆಲ್ಫಿಯಿಂದ ಕಳವಾಗಲಿದೆ ನಿಮ್ಮ ದುಡ್ಡು, ಡಿಐಜಿ ರೂಪಾ ಮೇಡಮ್ ನೀಡಿದ್ರು ಕಡಕ್ ಎಚ್ಚರಿಕೆ, ಏನು ಅಂತಾ ನೀವೆ ಓದಿ..!

ಇಂದು ಇಂಟರ್ನೆಟ್ ಖದೀಮರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇಂದು ಇವರ ಜಾಲ ನಾವು ದಿನನಿತ್ಯ ತೆಗೆಯುವ ಸೆಲ್ಫಿಯ ಕಡೆಗೂ ಬಿದ್ದಿದೆ. ತಮ್ಮ ಬುದ್ಧಿವಂತಿಕೆಯನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗ ಮಾಡುವ ಬದಲು ಇವರು ಜನರನ್ನು ಯಾಮಾರಿಸಲು ಬಳಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಈಗ ಈ ಸೈಬರ್ ಕಳ್ಳರು ಜನರನ್ನು ದೋಚಲು ಹೊಸ ಐಡಿಯಾವೊಂದನ್ನು ಕಂಡು ಹಿಡಿದಿದ್ದು ಇದರ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನು ದಕ್ಷ ಅಧಿಕಾರಿಣಿ ಎಂದೇ ಖ್ಯಾತರಾಗಿರುವ ಡಿಐಜಿ ರೂಪ ಅವರು ಟ್ವಿಟ್ಟರ್ ಮೂಲಕ ಬಯಲು ಮಾಡಿ ಜನರನ್ನು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ಎಲ್ಲರೂ ಸೆಲ್ಫಿ ಫೋಟೋ ಕ್ಲಿಕ್ಕಿಸುವಾಗ ತಂಬ್ಸ್ ಅಪ್ ಅಥವಾ ವಿಕ್ಟರಿ ಚಿಹ್ನೆ ತೋರಿಸುವುದು ಸಾಮಾನ್ಯ. ಈಗ ಇದನ್ನೇ ಬಳಸಿಕೊಂಡು ಸೈಬರ್ ಕಳ್ಳರ ಗುಂಪು ಜನರನ್ನು ದೋಚಲು ಮುಂದಾಗಿದೆ. ನಾವು ಈ ಶೈಲಿಯಲ್ಲಿ ಫೋಟೋ ಕ್ಲಿಕ್ಕಿಸುವಾಗ ಅಲ್ಲಿ ಕಾಣುವ ಬೆರಳಿನ ಮೂಲಕ ತಂತ್ರಜ್ಞಾನವನ್ನು ಉಪಯೋಗಿಸಿ ಬೆರಳಚ್ಚನ್ನು ತೆಗೆದು ಅದನ್ನುಪಯೋಗಿಸಿಕೊಂಡು ನಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಿ ಬ್ಯಾಂಕ್ ಖಾತೆಯಲ್ಲಿರುವ ಹಣ ಲಪಟಾಯಿಸುವ ಅಥವಾ ಇತರ ದಾಖಲೆಗಳನ್ನು ಬಳಸಿ ಮೋಸ ಮಾಡುವ ಗುಂಪು ಭಾರತ ಹಾಗೂ ಇತರ ರಾಷ್ಟಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ.

ಸಾಮಾನ್ಯವಾಗಿ ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಮುಂತಾದ ಅತ್ಯಮೂಲ್ಯ ದಾಖಲೆಗಳಿಗೆ ಬೆರಳಚ್ಚು ಅಗತ್ಯವಾಗಿದ್ದು ಇಲ್ಲಿ ನಮ್ಮ ಬೆರಳಚ್ಚಿನ ತುದಿಯಲ್ಲಿ ಗುರುತಿನ ಜೊತೆಜೊತೆಗೆ ಎಲ್ಲಾ ಮಾಹಿತಿಗಳು ಅಡಕವಾಗಿರುತ್ತದೆ. ನಾವು ಸಾಮಾಜಿಕ ಜಾಲತಾಣಗಳಲ್ಲಿ ತಂಬ್ಸ್ ಅಪ್ ಅಥವಾ ವಿಕ್ಟರೀ ಸಂಕೇತಗಳನ್ನು ತೋರಿಸುವಂತಹ ಉತ್ತಮ ಗುಣಮಟ್ಟದ ಭಾವಚಿತ್ರಗಳನ್ನು ಅಪ್ಲೋಡ್ ಮಾಡುತ್ತಿರುತ್ತೇವೆ. ಸೈಬರ್ ಕಳ್ಳರು ಈ ಮೂಲಕ ನಮ್ಮ ಬೆರಳಿನ ಅಚ್ಚುಗಳನ್ನು ಸೈಬರ್ ಕಳ್ಳರು ಸಲೀಸಾಗಿ ಕದ್ದು ನಮ್ಮ ಬ್ಯಾಂಕ್ ಖಾತೆ ಹಾಗೂ ಇತರ ವೈಯಕ್ತಿಕ ಮಾಹಿತಿಗಳನ್ನು ನಮಗೆ ತಿಳಿಯದಂತೆ ಹ್ಯಾಕ್ ಮಾಡಿ ಸಮಸ್ಯೆಯನ್ನು ಉಂಟು ಮಾಡುತ್ತಿದ್ದಾರೆ.

https://twitter.com/D_Roopa_IPS/status/1013516719929856004?s=19

 

ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಿಷ್ಠಾವಂತ ಅಧಿಕಾರಿಣಿ ಎಂದೇ ಖ್ಯಾತರಾಗಿರುವ ಡಿಐಜಿ ರೂಪಾ ಅವರು ಎಚ್ಚರಿಕೆ ನೀಡಿದ್ದು ಈ ಕುರಿತು 45 ಸೆಕೆಂಡ್ಸ್ ಗಳ ವಿಡಿಯೋವೊಂದನ್ನು ಟ್ವೀಟ್ ಮಾಡಿ ಸೆಲ್ಫಿ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಬೆರಳಚ್ಚು ನಕಲು ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಒಟ್ಟಾರೆ ಈ ಡಿಜಿಟಲ್ ಯುಗದಿಂದಾಗಿ ನಮಗೆ ಲಾಭದಷ್ಟೆ ನಷ್ಟ ಕೂಡ ಸಂಭವಿಸುವ ಸಾಧ್ಯತೆಯಿದ್ದು ನಾವು ನಮ್ಮ ಎಚ್ಚರಿಕೆಯಲ್ಲಿರುವುದು ಒಳ್ಳೆಯದು ಅಲ್ವಾ..!

Vishwa News 24

Recent Posts

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ – vishwanews24

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ಉಡುಪಿ: ಆಷಾಢ ಶುಕ್ಲ ಪ್ರಥಮ ಏಕಾದಶಿ ಅಂಗವಾಗಿ ಉಡುಪಿ ಜಿಲ್ಲೆಯ ಪ್ರಮುಖ ಮಠಗಳಲ್ಲಿ ತಪ್ತ…

10 hours ago

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ; ಆರೋಪಿಗಾಗಿ ಶೋಧ- vishwanews24

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ…

10 hours ago

ಆರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ -vishwanews24

ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ ಅಮರನಾಥ :ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನಗಳಿಂದ ನಿರಂತರ ಮಳೆ,…

11 hours ago

BREAKING NEWS : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ – vishwanews24

 ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನವದೆಹಲಿ: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದ…

11 hours ago

ಕಾಮನ್‌ವೆಲ್ತ್ ಗೇಮ್ಸ್ 2026 : ಪ್ಯಾರಾ ಪವರ್‌ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಝಂದು ಕುಮಾರ್ – vishwanews24

ಕಾಮನ್‌ವೆಲ್ತ್ ಗೇಮ್ಸ್ 2026 : ಭಾರತದ ಪದಕದ ಖಾತೆ ತೆರೆದ ಝಂದು ಕುಮಾರ್‌: ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಕಂಚಿನ ಸಾಧನೆ ಗ್ಲಾಸ್ಕೊ…

13 hours ago

ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ – vishwanews24

ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ ಅಯೋಧ್ಯೆ: ಶ್ರೀ ರಾಮಮಂದಿರದ ಪೂಜಾ ವಿಧಿವಿಧಾನಗಳು ಹಾಗೂ ಧಾರ್ಮಿಕ…

13 hours ago