ಹಾಲಾಡಿ ನಾಮ ಪತ್ರ ಸಲ್ಲಿಕೆ
ಉಡುಪಿ: ಪಕ್ಷೇತರ ಶಾಸಕರಾಗಿ ಗೆಲುವಿನ ನಾಗಲೋಟದಲ್ಲಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಪಕ್ಷಕ್ಕೆ ಸೇರಿ ಮೂಲಬಿಜೆಪಿಗರ ಹಲವು ವಿರೋಧಗಳ ನಡುವೆಯೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಯಾವುದೇ ಮೆರವಣಿಗೆ ಸಭೆ ಮಾಡದೆ ನಾಲ್ಕೈದು ಮಂದಿಯ ಜೊತೆ ಯಾರಿಗೂ ಮಾಹಿತಿ ನೀಡದೆ ದಿಢೀರ್ ಕುಂದಾಪುರ ತಾಲೂಕು ಕಚೇರಿಗೆ ಬಂದು ಚುನಾವಣಾಧಿಕಾರಿ ಬೂಬಾಲನ್ ಅವರಿಗೆ ನಾಮಪತ್ರ ಸಲ್ಲಿಸಿ, ಪರೀಕ್ಷೆಗೆ ಕುಳಿತುಕೊಳ್ಳುತ್ತಿದ್ದೇನೆ, ಅಂಕಗಳನ್ನು ಮತದಾರರು ನೀಡ್ತಾರೆ. ಪ್ರತೀ ಬಾರಿಯೂ ಅಂಕಗಳು ಹೆಚ್ಚಾಗುತ್ತಲೇ ಇದೆ. ಈ ಬಾರಿಯೂ ನನ್ನ ಭವಿಷ್ಯ ಜನರು ತೀರ್ಮಾನ ಮಾಡ್ತಾರೆ ಎಂದು ಹಾಲಾಡಿ ಈ ವೇಳೆ ಪ್ರತಿಕ್ರಿಯಿಸಿದ್ರು.
