ಹುಬ್ಬಳ್ಳಿ:ಉಚಿತ ಸೇವೆ ನೀಡುವ ‘ನಮ್ಮ ಕ್ಲಿನಿಕ್’ಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ – Vishwanews24
ಹುಬ್ಬಳ್ಳಿ: ಉಚಿತ ಸೇವೆ ನೀಡುವ ‘ನಮ್ಮ ಕ್ಲಿನಿಕ್’ಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ: ನಮ್ಮ ಕ್ಲಿನಿಕ್ಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡಿದರು. ಇದೇ ವೇಳೆ ಅವರು ಮಾತನಾಡಿ, ಇದರ ಸೇವೆಯನ್ನು ಎಲ್ಲರ ಪಡೆದುಕೊಳ್ಳಬೇಕು ಅಂತ ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತ, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಈ ನಿಟ್ಟಿನಲ್ಲಿ ನಾವು ಜನರ ಬೆಂಬಲಕ್ಕೆ ಇದ್ದೇವೆ ಅಂಥ ತಿಳಿಸಿದರು.
ಇದೇ ವೇಳೆ ಅವರು ರಾಜ್ಯದ ಎಲ್ಲರ ಆರೋಗ್ಯ ಕಾಪಾಡಲಾಗುವುದು ಅಂತ ತಿಳಿಸಿದರು.
ಹೋರಿ ಬೆದರಿಸುವ ಹಬ್ಬ : ಕೊಬ್ಬರಿ ಹೋರಿ ತಿವಿದು ಯುವಕ ಸಾವು ,12ಕ್ಕೂ ಅಧಿಕ ಮಂದಿಗೆ ಗಾಯ – Vishwanews24
ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ಆರ್.ಸುಧಾಕರ್ ಅವರು ಮಾತನಾಡಿ ಒಂದು ದೇಶ ಒಂದು ರೇಶನ್ ರೀತಿಯಲ್ಲಿ ನಾವು ಈ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಹಿಂದೆ ಯಾರು ಮಾಡದ ಯೋಜನೆಗಳನ್ನು ಜನರ ಸಲುವಾಗಿ ಮಾಡುತ್ತಿದ್ದೇವೆ ಅಂತ ಹೇಳಿದರು. ಆರೋಗ್ಯವೇ ಮಹಾಭಾಗ್ಯವಾಗಿದ್ದು, ಆರೋಗ್ಯದಲ್ಲಿ ನಾವು ಚೆನ್ನಾಗಿ ಇರಬೇಕು, ಇದು ನಮ್ಮ ರಾಜ್ಯಕ್ಕೆ ಒಳ್ಳೆಯದು ಅಂತ ತಿಳಿಸಿದರು. ಇವತ್ತು ಪ್ರಾಥಮಿಕ ಚಿಕಿತ್ಸೆ ಕ್ರಮಗಳು, ಸಿಗಲಿದೆ ಅಂತ ತಿಳಿಸಿದರು. ಜನಸಂಖ್ಯೆಗೆ ಅನುಗುಣವಾಗಿ ಇರಲಿಲ್ಲ. ಇದನ್ನು ನಾವು ಮನಗಂಡು, ಇದಕ್ಕೆ ಕಾಯಕಲ್ಪ ಕೊಟ್ಟು 430 ಕೇಂದ್ರಗಳನ್ನು ಮೊದಲ ಹಂತದಲ್ಲಿ ತನ್ನ ಕೆಲಸವನ್ನು ಮಾಡಲಿದ್ದಾರೆ ಅಂತ ತಿಳಿಸಿದರು. ನಮ್ಮ ಕ್ಲಿನಿಕ್ ನಲ್ಲಿ ವೈದ್ಯರು ಸೇರಿದಂತೆ ಸಂಬಂಧಪಟ್ಟ ನುರಿತ ತಜ್ಞನರು ಲಭ್ಯವಿರುತ್ತಾರೆ ಅಂತ ತಿಳಿಸಿದರು. ಈ ಸೇವೆಯು ಉಚಿತವಾಗಿದ್ದು, ಇಲ್ಲಿ ಮುವಕ್ಕಿಂಥ ಹೆಚ್ಚಿನ ವಯಸ್ಕರು ಸಂಪೂರ್ಣವಾದ ತಪಾಸಣೆಯನ್ನು ನಡೆಸಿ ಅಂತ ಮನವಿ ಮಾಡಿಕೊಂಡರು. ಇದರಿಂದ ಅವಧಿಗೂ ಮುನ್ನವೇ ನಾವು ಆಪಾಯಿಂದ ಪಾರಾಗಬಹುದು ಅಂತ ತಿಳಿಸಿದರು.
