ಕಾಪು: ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುಮಾರು ಹತ್ತು ಕೋಟಿ ವೆಚ್ಚದಲ್ಲಿ ಸಮಗ್ರ ಜೀಣೋದ್ಧಾರದ ಅಂಗವಾಗಿ ಆದಿತ್ಯವಾರ ದೇಗುಲದ ವಠಾರದಲ್ಲಿ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭವು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮತ್ತು ವಿಜ್ಞಾಪನಾ ಪತ್ರ ಬಿಡುಗಡೆಯನ್ನು ಉದ್ಯಮಿ ೨೦೧೯ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಕೆ ಪ್ರಕಾಶ್ ಶೆಟ್ಟಿ ನೆರವೇರಿಸಿದರು.ತದನಂತರ ಮಾತಾಡಿ ಈ ಐತಿಹಾಸಿಕ ದೇಗುಲ ನಿರ್ಮಾಣ ಕಾರ್ಯದಲ್ಲಿ ನನ್ನನ್ನು ಪಾಲುದಾರರನ್ನಾಗಿಸಿದ ದೇವರಿಗೆ ಹಾಗೂ ಕಮಿಟಿ ಸದಸ್ಯರಿಗೆ ವಂದನೆಗಳು, ತುಳುನಾಡಿನ ದೇವಸ್ಥಾನಗಳು ಜೀರ್ಣೋದ್ದಾರಗೊಂಡು ಮುಂದಿನ ಪೀಳಿಗೆಗೆ ಅದು ಕೊಡುಗೆಯಾಗಬೇಕು ಎಂದರು.ನೂತನ ದೇಗುಲದ ನೀಲನಕಾಶೆಯನ್ನು ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್ ನೆರೆವೇರಿಸಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತಾಡಿ” ಹೆಜಮಾಡಿ ಉಡುಪಿ ಜಿಲ್ಲೆಯ ಹೆಬ್ಬಾಗಿಲು ಇಲ್ಲಿನ ದೇಗುಲ ನಿರ್ಮಾಣ ಆಗುವಂತಹ ಕಾರ್ಯ ಅತ್ಯಂತ ಸಂತಸ ಹಾಗೂ ಖುಷಿಯ ವಿಚಾರ, ಧಾರ್ಮಿಕ ಕ್ಷೇತ್ರಗಳು ಅಭಿವೃದ್ದಿ ಹೊಂದಿದಾಗ ಮಾನವರು ಕೂಡ ಅಭಿವೃದ್ದಿ ಪಥದಲ್ಲಿ ಸಾಗಲು ಸಾಧ್ಯ ಎಂದರು.
ಕಾರ್ಯಕ್ರದಲ್ಲಿ ಉದ್ಯಮಿ ಪ್ರಕಾಶ್ ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು ಮತ್ತು ಎಡಪದವು ರಾಧಕೃಷ್ಣ ತಂತ್ರಿ ಆರ್ಶೀವಚನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀಣೋದ್ದಾರ ಸಮಿತಿ ಅಧ್ಯಕ್ಷರು ಜಯಂತ್ ಶೆಟ್ಟಿ ವಹಿಸಿದ್ದರು.
ಆಡಳಿತ ಮೊಕ್ತೆಸರರು ಶ್ರೀ ದಯಾನಂದ ಹೆಜಮಾಡಿ , ಡಾ| ಎಚ್.ಟಿ ಮನೋರಮ ರಾವ್,ಸಂತೋಷ್ ಶೆಟ್ಟಿ ಪೂಣೆ,ವಾಸುದೇವ ಆರ್ ಕೋಟ್ಯಾನ್,ಸುಮನ್ ತಲವಾರ್ ಹೆಜಮಾಡಿ,ಶಶಿಕಾಂತ್ ಪಡುಬಿದ್ರಿ,ನೀತಾ ಗುರುರಾಜ್,ರೇಣುಕಾ ಪುತ್ರನ್,ವಿಶಾಲಕ್ಷಿ ಪುತ್ರನ್,ಪುರುಷೋತ್ತಮ ಗುರಿಕಾರ,ರತ್ನಾಕರ ಶೆಟ್ಟಿ,ಕೊಂಬೆಟ್ಟು ರಘುಪತಿ ರಾವ್,ಶಂಕರ್ ಶೆಟ್ಟಿ ,ಗೀತಾಂಜಲಿ ಸುವರ್ಣ,ಪುಷ್ಪರಾಜ್ ಎಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಸುಧಾಕರ ಕರ್ಕೇರ ಸ್ವಾಗತಿಸಿ, ಅರ್ಪಿತಾ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ,ಓಂದಾಸ್ ಹೆಜಮಾಡಿ ವಂದಿಸಿದರು.
ವರದಿ: ಪುರುಷೋತ್ತಮ ಸಾಲಿಯಾನ್,ವಿಶ್ವನ್ಯೂಸ್೨೪
ಮಲ್ಪೆ : ಆಳಸಮುದ್ರದಲ್ಲಿ ಭಾರೀ ಗಾಳಿ: ಮೀನುಗಾರಿಕೆಗೆ ತೆರಳದ ಪರ್ಸೀನ್ ಬೋಟುಗಳು ಮಲ್ಪೆ: ಕಳೆದ ಎರಡು ದಿನಗಳಿಂದ ಆಳಸಮುದ್ರದಲ್ಲಿ ಭಾರೀ…
ಸೆ.7ರೊಳಗೆ ಕರಾವಳಿ – ಮಲೆನಾಡು ಪ್ರವಾಸೋದ್ಯಮ ನೀತಿಯ ಕರಡು ಸಿದ್ಧ: ಕೆ.ಜೆ. ಜಾರ್ಜ್ ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು…
ಮಂಗಳೂರು: ವಂದೇ ಭಾರತ್ ಎಕ್ಸ್ಪ್ರೆಸ್ ಅಡುಗೆ ಸೇವಾ ಘಟಕವನ್ನು ಪರಿಶೀಲಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಮಂಗಳೂರು : ಮಂಗಳೂರು ಸೆಂಟ್ರಲ್…
ಉಡುಪಿ : ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಾಳಿ ; ರಾಸಾಯನಿಕಯುಕ್ತ ಬಾಳೆಹಣ್ಣುಗಳ ನಾಶ ಪಡಿಸಿದ ಅಧಿಕಾರಿಗಳು ಉಡುಪಿ :…
ತುಳುಕೂಟ ಉಡುಪಿ: 2026–27ನೇ ಸಾಲಿನ ಕಾರ್ಯಕಾರಿ ಸಮಿತಿ ಪ್ರಕಟ- ಅಧ್ಯಕ್ಷರಾಗಿ ಬಿ. ಜಯಕರ ಶೆಟ್ಟಿ ಇಂದ್ರಾಳಿ ತುಳು ಭಾಷೆ, ಸಾಹಿತ್ಯ,…
ಎಲ್ಪಿಜಿ: ಇ-ಕೆವೈಸಿ ದಿನಾಂಕ ಆ. 23ರ ವರೆಗೆ ವಿಸ್ತರಣೆ ಉಡುಪಿ: ಎಲ್ಪಿಜಿ ಗ್ರಾಹಕರಿಗೆ ಇ-ಕೆವೈಸಿ ಪೂರ್ಣ ಗೊಳಿಸಲು ನೀಡಲಾಗಿದ್ದ ಗಡುವನ್ನು ಆ.…