ಹೊಸದಿಲ್ಲಿ: ಸ್ವಂತ ಹಣದಿಂದ ಬಡವರಿಗಾಗಿ 1 ರೂ.ಗೆ ಊಟದ ಕ್ಯಾಂಟಿನ್‌ ತೆರೆದ  ಗೌತಮ್ ಗಂಭೀರ್‌ -Vishwanews24

ಉಡುಪಿ

ಹೊಸದಿಲ್ಲಿ: ಸ್ವಂತ ಹಣದಿಂದ ಬಡವರಿಗಾಗಿ 1 ರೂ.ಗೆ ಊಟದ ಕ್ಯಾಂಟಿನ್‌ ತೆರೆದ  ಗೌತಮ್ ಗಂಭೀರ್‌ -Vishwanews24

ಹೊಸದಿಲ್ಲಿ: ಬಿಜೆಪಿ ಸಂಸದ ಗೌತಮ್‌ ಗಂಭೀರ ವಿನೂತನ ಕ್ಯಾಂಟೀನ್‌ವೊಂದನ್ನು ತಮ್ಮ ಹಣದಿಂದಲೇ ತೆರೆದಿದ್ದು, ಈ ಹೋಟೆಲ್‌ನಲ್ಲಿ ಒಂದು ರೂಪಾಯಿಗೆ ಊಟ ಸಿಗುತ್ತಿದೆ.

ಜನ ರಸೋಯಿ ಎಂಬ ಹೆಸರಿನ ಕ್ಯಾಂಟೀನ್‌ವೊಂದನ್ನು ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಆರಂಭಿಸಿದ್ದು, ಬಡವರಿಗೆ ಎರಡು ಹೊತ್ತು ಊಟ ಸಿಗಬೇಕು ಎನ್ನುವ ಉದ್ದೇಶದಿಂದ ಈ ಕ್ಯಾಂಟೀನ್‌ ಆರಂಭಿಸಿರುವುದಾಗಿ ಗಂಭೀರ್‌ ಮಾಹಿತಿ ನೀಡಿದ್ದಾರೆ. ಕಡು ಬಡವರು ದಿನಕ್ಕೆ ಎರಡು ಹೊತ್ತಿನ ಊಟಕ್ಕೂ ಪರದಾಡುವುದನ್ನು ನೋಡಿ ನಾನು ಬೇಸರಗೊಂಡಿದ್ದೆ. ಇದಕ್ಕಾಗಿ ಗಾಂಧಿನಗರದಲ್ಲಿ ಸುಸಜ್ಜಿತವಾದ ‘ಜನ್ ರಸೋಯಿ’ ಆಧುನಿಕ ಕ್ಯಾಂಟೀನ್ ಆರಂಭಿಸಲಾಗಿದೆ.

ಅಗತ್ಯವಿರುವವರು ಇಲ್ಲಿಗೆ ಬಂದು 1 ರೂಪಾಯಿ ನೀಡಿ ಊಟ ಮಾಡಬಹುದು’ ಎಂದು ಗಂಭೀರ್ ತಿಳಿಸಿದ್ದಾರೆ. ಮುಂದಿನ ಗಣರಾಜ್ಯೋತ್ಸವದ ದಿನ ದಿಲ್ಲಿಯ ಅಶೋಕನಗರದಲ್ಲಿ ಮತ್ತೊಂದು ಕ್ಯಾಂಟೀನ್‌ ಆರಂಭಿಸುವುದಾಗಿಯೂ ಗೌತಮ್ ಗಂಭೀರ್‌ ತಿಳಿಸಿದ್ದಾರೆ. ಜಾತಿ, ಮತ, ಧರ್ಮ ಅಥವಾ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಪ್ರತಿಯೊಬ್ಬರಿಗೂ ಆರೋಗ್ಯಕರ ಮತ್ತು ಶುಚಿತ್ವವಿರುವ ಆಹಾರ ಸಿಗಬೇಕು ಎಂದು ನಾನು ಭಾವಿಸುತ್ತೇನೆ.

ದಿಲ್ಲಿಯ ಪ್ರತಿಯೊಬ್ಬ ವ್ಯಕ್ತಿಗೆ ಆರೋಗ್ಯಕರ ಆಹಾರ ಮತ್ತು ಶುದ್ಧ ನೀರನ್ನು ಪಡೆಯುವ ನನ್ನ ಕನಸು ನನಸಾಗುವ ವರೆಗೆ ನಾನು ಶ್ರಮಿಸುತ್ತೇನೆ ಎಂದು ತಿಳಿಸಿದ್ದಾರೆ. ಪೂರ್ವ ದಿಲ್ಲಿಯ ಗಾಂಧಿನಗರದಲ್ಲಿ ಈ ಕ್ಯಾಂಟೀನ್‌ ಇದ್ದು, ಸಂಪೂರ್ಣ ಅಭಿವೃದ್ಧಿ ಹೊಂದಿದ ಖಾಸಗಿ ಕ್ಯಾಂಟೀನ್ ಇದಾಗಿದೆ. ಇತರೆ ಹೋಟೆಲ್‌ಗಿಂತಲೂ ಕಮ್ಮಿ ಇಲ್ಲವೆಂಬಂತೆ ನಿರ್ಮಾಣಗೊಂಡಿದೆ. ಈ ಕ್ಯಾಂಟೀನ್‌ನ ಸಂಪೂರ್ಣ ವೆಚ್ಚವನ್ನು ಗೌತಮ್‌ ಗಂಭೀರ್‌ ನೋಡಿಕೊಳ್ಳುತ್ತಿದ್ದಾರೆ.