ಹೋಟೆಲ್-ಕ್ಯಾಂಟೀನ್ ನೀರು ಕುಡಿಯುವ ಮುನ್ನ ಎಚ್ಚರ-ಉಡುಪಿ ಜಿಲ್ಲೆಯಲ್ಲಿ ಹಬ್ಬುತ್ತಿದೆ ಕಾಲರಾ ರೋಗ: vishwanews24

Featured, ಉಡುಪಿ

ಹೋಟೆಲ್-ಕ್ಯಾಂಟೀನ್ ನೀರು ಕುಡಿಯುವ ಮುನ್ನ ಎಚ್ಚರ-ಉಡುಪಿ ಜಿಲ್ಲೆಯಲ್ಲಿ ಹಬ್ಬುತ್ತಿದೆ ಕಾಲರಾ ರೋಗ

ಕಾಪು ಶಿರ್ವ ಮಲ್ಪೆ ಕೆಮ್ಮಣ್ಣು ಭಾಗದಲ್ಲಿ ಕಾಲರಾ!!!

ಉಡುಪಿ: ಮಳೆಗಾಲ ಮುಗಿಯುತ್ತಿದ್ದಂತೆ ಜಿಲ್ಲೆಯಲ್ಲಿ ಕಾಲರಾ ರೋಗದ ಹಾವಳಿ ಜಾಸ್ತಿಯಾಗಿದ್ದು ದಿನದಿಂದ ದಿನಕ್ಕೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಉಡುಪಿ ಜಿಲ್ಲಾಧಿಕಾರಿಯೇ ಖುದ್ದಾಗಿ ಆದೇಶ ಹೊರಡಿಸಿದ್ದಾರೆ.ಕಳೆದ ಒಂದು ವಾರದಲ್ಲಿ 11 ಪ್ರಕರಣಗಳು ವರದಿಯಾಗಿದ್ದು ಕಾಪು ಶಿರ್ವ ಮಲ್ಪೆ ಕೆಮ್ಮಣ್ಣು ಭಾಗದಲ್ಲಿ ಕೂಡ ಕಾಲರಾ ರೋಗ ಬಂದಿರುವ ಬಗ್ಗೆ ವರದಿಯಾಗಿದೆ.

ಕುಡಿಯುವ ನೀರಿನ ಬಗ್ಗೆ ಎಚ್ಚರ…!!
ಮನೆ ಅಥಾವ ವಿಶೇಷವಾಗಿ ರಸ್ತೆ ಬದಿಯ ಕ್ಯಾಂಟೀನ್, ಹೋಟೆಲುಗಳಲ್ಲಿ ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ.

Leave a Reply