15 ವರ್ಷಗಳ ಹಿಂದೆಯೇ ಕೋಟಿ ಹಣವನ್ನು ಕಂಡಿದ್ದೇನೆ , ಧರ್ಮಸ್ಥಳದ ಮಂಜುನಾಥನ ಆಣೆಗೂ ನಾನು ಹಣ ಪಡೆದಿಲ್ಲ : ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ -Vishwanews24
ಮುಂಡಗೋಡ : ಪ್ರಸ್ತುತ ರಾಜಕೀಯ ಬೆಳವಣಿಗೆಯಲ್ಲಿ ಕೋಟ್ಯಂತರ ರೂ.ಗಳಿಗೆ ಮಾರಾಟವಾಗಿದ್ದೆನೆಂದು ಅನೇಕ ಮಾಧ್ಯಮಗಳು ಬಿಂಬಿಸಿವೆ. ಆದರೆ, ಧರ್ಮಸ್ಥಳದ ಮಂಜುನಾಥನ ಆಣೆಗೂ ನಾನು ಹಣ ಪಡೆದಿಲ್ಲ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. 15 ವರ್ಷಗಳ ಹಿಂದೆಯೇ ಕೋಟಿ ಹಣವನ್ನು ಕಂಡಿದ್ದೇನೆ. ಮಾಧ್ಯಮಗಳಲ್ಲಿ ಕೋಟ್ಯಾಂತರ ರೂ.ಗಳಿಗೆ ಮಾರಾಟವಾಗಿದ್ದೇನೆ ಎಂದು ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಸಹಾಯಕತೆ ನಡುವೆ ಕಠಿಣ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆ ಬಂತು. 20 ಶಾಸಕರು ರಾಜೀನಾಮೆ ನೀಡಬೇಕಾದರೆ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಒತ್ತಡಕ್ಕೆ ಒಳಗಾಗಿ ಸ್ಪೀಕರ್ ನಿರ್ಣಯ ತೆಗೆದುಕೊಂಡಿದ್ದು, ಇದಕ್ಕೆಲ್ಲ ಹೆದರುವುದಿಲ್ಲ, 15 ದಿನಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಯುತ್ತೆ ಎಂದರು.
