Featured

2018ರಿಂದ 2020ರವರೆಗಿನ ಮೂರು ಸಾಲುಗಳ ತುಳು ಅಕಾಡೆಮಿ ಪ್ರಶಸ್ತಿ ಪ್ರಕಟಸಿ, ಮಾರ್ಚ್ 7ರಂದು ಬೆಂಗಳೂರಿನಲ್ಲಿ ವಿತರಣೆ -Vishwanews24

2018ರಿಂದ 2020ರವರೆಗಿನ ಮೂರು ಸಾಲುಗಳ ತುಳು ಅಕಾಡೆಮಿ ಪ್ರಶಸ್ತಿ ಪ್ರಕಟಸಿ, ಮಾರ್ಚ್ 7ರಂದು ಬೆಂಗಳೂರಿನಲ್ಲಿ ವಿತರಣೆ -Vishwanews24

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ ಸಾರ್ ಅವರು ಅಕಾಡೆಮಿಯ ಸಿರಿ ಚಾವಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ 2018, 2019, 2020ರ‌ ಮೂರು ವರ್ಷಗಳ ಪ್ರಶಸ್ತಿ ಪ್ರಕಟಿಸಿ, ಮಾರ್ಚ್ 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ದಿನ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ನಡೆಯುವುದನ್ನು ವಿವರಿಸಿದರು.

2018ಕ್ಕೆ ಹಿಂದಿನ ಅಕಾಡೆಮಿ ಪ್ರಕಟಿಸಿದ್ದನ್ನೇ ಉಳಿಸಿಕೊಂಡು ಒಟ್ಟು ಮೂರು ವರುಷಗಳ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಮಂತ್ರಿ ಸದಾನಂದ ಗೌಡ, ಮುಖ್ಯ ಮಂತ್ರಿ ಯಡಿಯೂರಪ್ಪ, ಸಂಸ್ಕೃತಿ ಇಲಾಖೆಯ ಸಿ. ಟಿ. ರವಿ, ಇಲ್ಲಿನ ಮಂತ್ರಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಸಚಿವ ಅರವಿಂದ ಲಿಂಬಾವಳಿ, ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಮತ್ತಿತರರು ಭಾಗವಹಿಸುವರೆಂದು ಕತ್ತಲ್ ಸಾರ್ ಮಾಹಿತಿ ನೀಡಿದರು.

ಚಳಿಗಾಲದ ಬಳಿಕ ಪೆಟ್ರೋಲ್ ಬೆಲೆಯಲ್ಲಿ ಸ್ವಲ್ಪ ಮಟ್ಟದ ಇಳಿಕೆಯಾಗಲಿದೆ : ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ -Vishwanews24

ಮೂರು ವರುಷಗಳಲ್ಲಿ ಕ್ರಮವಾಗಿ ತುಳು ಸಾಹಿತ್ಯ ಕ್ಷೇತ್ರ ಲಲಿತಾ ಆರ್. ರೈ, ಎಸ್. ಆರ್. ವಿಘ್ನರಾಜ್ ಧರ್ಮಸ್ಥಳ, ರಾಮಚಂದರ್ ಬೈಕಂಪಾಡಿ; ತುಳು ನಾಟಕ ರಂಗದಲ್ಲಿ ರತ್ನಾಕರ ರಾವ್ ಕಾವೂರು, ದಿ. ತಿಮ್ಮಪ್ಪ ಗುಜರನ್ ತಲಕಳ, ತುಂಗಪ್ಪ ಬಂಗೇರ ಪುಂಜಾಲಕಟ್ಟೆ; ತುಳು ಜಾನಪದ ಕ್ಷೇತ್ರದ ಎ. ಕೆ. ವಿಜಯ್ ಕೋಕಿಲ, ಗುರುವ ಕೊರಗ ಹಿರಿಯಡ್ಕ, ಆನಂದ ಪೂಜಾರಿ ಹಳೆಯಂಗಡಿ ಪ್ರಶಸ್ತಿ ಪುರಸ್ಕೃತರು.

ಮೂರು ಸಾಲಿನಲ್ಲಿ ಕ್ರಮವಾಗಿ ತುಳು ಕವನ ವಿಭಾಗದಲ್ಲಿ ಶಾಂತಾರಾಂ ವಿ. ಶೆಟ್ಟಿ, ಕುಶಾಲಾಕ್ಷಿ ವಿ. ಕುಲಾಲ್, ತುಳು ಕಾದಂಬರಿ ವಿಭಾಗದಲ್ಲಿ ರಾಜಶ್ರೀ ಟಿ. ರೈ ಪೆರ್ಲ, ತುಳು ಕವನ ವಿಭಾಗದಲ್ಲಿ ಚಿನ್ನಪ್ಪ ಗೌಡ ಪ್ರಶಸ್ತಿ ವಿಜೇತರಾಗಿದ್ದಾರೆ.

ಅಲ್ಲದೆ ಈ ಬಾರಿ ವಿಶೇಷವಾಗಿ ಸಂಘಟನೆ ಯೋಗೀಶ್ ಶೆಟ್ಟಿ ಜೆಪ್ಪು, ನಿರೂಪಣೆ ನವೀನ್ ಶೆಟ್ಟಿ ಎಡೈಮಾರ್, ಜನಪದ ಸಂಘಟನೆ ರಮೇಶ್ ಪಿ. ಮೆಟ್ಟಿನಡ್ಕ, ತುಳು ದೈವ ಕ್ಷೇತ್ರ ನಾಗರಾಜ ಭಟ್, ತುಳು ಕಲಾ ಪೋಷಣೆ ಭರತ್ ಸೌಂದರ್ಯ, ತುಳು ಶಾಸನ ಕ್ಷೇತ್ರ ಸುಭಾಷ್ ನಾಯಕ್, ತುಳು ಲಿಪಿ ಸಂಶೋಧನೆ ದೀಪಕ್ ಪಡುಕೋಣೆ ಇವರೆಲ್ಲ ಪ್ರಶಸ್ತಿ ಪಡೆಯುವವರಾಗಿದ್ದಾರೆ.

ಮೊದಲು ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ. ಎಲ್ಲರನ್ನೂ ಸ್ವಾಗತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ‌ ಲೀಲಾಕ್ಷ ಕರ್ಕೇರ, ನಾಗೇಶ್ ಕುಲಾಲ್, ರವೀಂದ್ರ ಶೆಟ್ಟಿ, ವಿಜಯಲಕ್ಷ್ಮಿ ಪಿ. ರೈ, ಮಲ್ಲಿಕಾ ಅಜಿತ್ ಶೆಟ್ಟಿ, ಕಡಬ ದಿನೇಶ್ ರೈ, ಶ್ರೀಮತಿ ತಾರಾ, ಶಶಿಧರ ಶೆಟ್ಟಿ ನಿಟ್ಟೆ ಕಲಾವತಿ ದಯಾನಂದ್ ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ – vishwanews24

ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ…

2 hours ago

ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ – vishwanews24

ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ ಹಾಸನ: ಡೆತ್ ನೋಟ್ ಬರೆದಿಟ್ಟು 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೋರ್ವ…

2 hours ago

ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ – vishwanews24

ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘ ಸಭೆ ೨೦೨೩-೨೦೨೪ ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ…

3 hours ago

ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ತರಕಾರಿಗಳಿಗೆ ಕೆಮಿಕಲ್‌ ಸ್ಪ್ರೇ ಬಗ್ಗೆ ಕ್ರಮ : ಖಾದರ್‌ – vishwanews24

ಆನ್‌ಲೈನ್‌ನಲ್ಲಿ ಮಾರಾಟ ಮಾಡೋ ತರಕಾರಿಗೆ ಕೆಮಿಕಲ್‌ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ.. ಪರಿಶೀಲನೆ ಮಾಡ್ತಿದ್ದೇವೆ, ಮುಂದಿನ ದಿನಗಳಲ್ಲಿ ಕ್ರಮ…

4 hours ago

ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ – vishwanews24

ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ ಕಾಸರಗೋಡು :…

4 hours ago

ಇನ್ನು ಮುಂದೆ ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ:  CM ಡಿ.ಕೆ. ಶಿ ಸ್ಪಷ್ಟನೆ – vishwanews24

ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ:  ಡಿ.ಕೆ. ಶಿ ಸ್ಪಷ್ಟನೆ…

5 hours ago