2019-20 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಘೋಷಣೆ : ಹಿರಿಯ ರಂಗಕರ್ಮಿ ಉಮಾಶ್ರೀ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ 2019-20 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಹಿರಿಯ ರಂಗಕರ್ಮಿ ಉಮಾಶ್ರೀ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ.

ಕಲಾವಿದ ಅರುಣ್ ಸಾಗರ್, ಸಾಹಿತಿ ಲಕ್ಷ್ಮೀಪತಿ ಕೋಲಾರ ಅವರಿಗೆ ವಾರ್ಷಿಕ ರಂಗ ಪ್ರಶಸ್ತಿ ನೀಡಲಾಗಿದೆ. ಧರ್ಮೇಂದ್ರ ಅರಸು (ಬೆಂಗಳೂರು), ಚಿಕ್ಕಹನುಮಂತಯ್ಯ (ತುಮಕೂರು), ಗ್ಯಾರಂಟಿ ರಾಮಣ್ಣ (ಹಾಸನ), ನಾಗಪ್ಪ ಬಳೆ (ರಾಯಚೂರು), ಪ್ರಭಾಕರ್ ಕುಲಕರ್ಣಿ(ಬಾಗಲಕೋಟೆ), ಗುರುಬಸಪ್ಪ ಕಲ್ಲಪ್ಪ ಸಜ್ಜನ (ವಿಜಯಪುರ), ಗೀತಾ ಸೂರತ್ಕಲ್ (ಮಂಗಳೂರು), ಸಣ್ಣಪ್ಪ ಕೊಳಗಳ್ಳಿ (ಮಂಡ್ಯ), ರಾಜಗೋಪಾಲ ಶೇಠ್ (ಉಡುಪಿ), ಎಸ್. ತಿಪ್ಪೇಸ್ವಾಮಿ (ಚಳ್ಖಕೆರೆ), ಕೊಟ್ರಪ್ಪ ಚೆನ್ನಪ್ಪ ಕೊಟ್ರಪ್ಪನವರ್ (ಹಾವೇರಿ), ಬಸವರಾಜ್ ಕಡ್ಲೆಣ್ಣವರ್ (ಧಾರವಾಡ), ಎನ್.ಮಂಜಮ್ಮ ಗುಬ್ಬಿ (ಗದಗ)

ಎಚ್.ಎಸ್. ಪ್ರಸನ್ನ (ಸಾಗರ), ಈಶ್ವರಪ್ಪ ಫರ್ಹಾತಾಬಾದ್ (ಕಲಬರ್ಗಿ), ವೆಂಕಟೇಶ್ (ಪ್ರಭಾತ್ ಕಲಾವಿದರು) ಕೊಡಗನೂರು (ದಾವಣಗೆರೆ), ಮಾ.ಬ ಸೋಮಣ್ಣ (ಬಳ್ಳಾರಿ), ವಿಜಯಕುಮಾರ್ ಜತೂರಿ (ಗದಗ) ಅವರಿಗೆ ವಾರ್ಷಿಕ ರಂಗ ಪ್ರಶಸ್ತಿ ನೀಡಲಾಗಿದೆ.

ಹೀಗೆ ಒಟ್ಟು 25 ವಾರ್ಷಿಕ ಪ್ರಶಸ್ತಿ ಹಾಗೂ ನಾಲ್ಕು ಅಕಾಡೆಮಿ ದತ್ತಿ ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಜೀವಮಾನ ಸಾಧನೆ ಪ್ರಶಸ್ತಿಯು 50 ಸಾವಿರ ರು.ನಗದು, ವಾರ್ಷಿಕ ರಂಗ ಪ್ರಶಸ್ತಿಯು 25 ಸಾವಿರ ರು.ನಗದು ಹಾಗೂ ದತ್ತಿ ಪ್ರಶಸ್ತಿಗಳು ತಲಾ 5 ಸಾವಿರ ರು.ನಗದು ಪ್ರಶಸ್ತಿಯನ್ನು ಒಳಗೊಂಡಿವೆ. ಪ್ರಶಸ್ತಿ ಪ್ರದಾನ ಸಮಾರಂಭವು ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದ್ದು, ಶೀಘ್ರವೇ ದಿನಾಂಕ ಪ್ರಕಟಿಸುವುದಾಗಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ತಿಳಿಸಿದ್ದಾರೆ.