Featured

2021 ಗಣೇಶ ಚತುರ್ಥಿ: ಗಣೇಶನ ಈ ಮಂತ್ರಗಳನ್ನು ಪಠಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯು ಹೆಚ್ಚಾಗುತ್ತದೆ -Vishwanews24

2021 ಗಣೇಶ ಚತುರ್ಥಿ: ಗಣೇಶನ ಈ ಮಂತ್ರಗಳನ್ನು ಪಠಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯು ಹೆಚ್ಚಾಗುತ್ತದೆ -Vishwanews24

ಗಣೇಶ ಚತುರ್ಥಿಯಂದು ಮನೆಮನೆಗಳಲ್ಲಿ ಗಣೇಶನನ್ನು ಪೂಜಿಸಲಾಗುತ್ತದೆ. ಈ ಪೂಜೆಯ ವೇಳೆ ಗಣೇಶನನ್ನು ಬಹುಬೇಗ ಸಂತೋಷಗೊಳಿಸಲು ಕೆಲವೊಂದು ಮಂತ್ರಗಳನ್ನು ಪಠಿಸಬೇಕು. ಆ ಮಂತ್ರಗಳು ಯಾವುವು..? ಗಣೇಶ ಮಂತ್ರದ ಪ್ರಯೋಜನವೇನು..?

ಗಣೇಶ ಚತುರ್ಥಿಯಂದು ರಿದ್ಧಿ, ಸಿದ್ಧಿ ಮತ್ತು ಸಂಪತ್ತಿಗಾಗಿ ಗಣೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಗಣೇಶ ಚತುರ್ಥಿ ಪೂಜೆಯಲ್ಲಿ ಗಣೇಶನ ಆಶೀರ್ವಾದ ಪಡೆಯಲು ಯಾವ ಮಂತ್ರಗಳನ್ನು ಪಠಿಸಬೇಕು ಗೊತ್ತಾ..? ಗಣೇಶನ ಈ ಮಂತ್ರಗಳನ್ನು ಪಠಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯು ಹೆಚ್ಚಾಗುತ್ತದೆ. ಅಷ್ಟು ಮಾತ್ರವಲ್ಲ, ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಕೂಡ ನೀವು ಗಣೇಶನನ್ನು ಈ ಮಂತ್ರಗಳಿಂದ ಪೂಜಿಸಬಹುದು. ಮಂತ್ರಗಳಾವುವು ಗೊತ್ತಾ..?

1) ಶುಭ ಕಾರ್ಯಗಳ ಆರಂಭಕ್ಕೂ ಮುನ್ನ ಗಣೇಶ ಮಂತ್ರ:

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ

ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ ||

2) ಗಣೇಶನಿಗೆ ನಮಸ್ಕರಿಸುವ ಮಂತ್ರ:

ಪ್ರಣಾಮ್ಯ ಶಿರಸಾ ದೇವಂ ಗೌರಿಪುತ್ರಂ ವಿನಾಯಕಂ |

ಭಕ್ತಾವಾಸಂ ಸ್ಮರೇನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ ||

ಗೌರಿ ಪುತ್ರನಾದ ಭಗವಾನ್‌ ಶ್ರೀ ಗಣೇಶನಿಗೆ ನಮಸ್ಕರಿಸುತ್ತಾ, ನಮಗೆ ಆಯಸ್ಸು, ಆರೋಗ್ಯ ಮತ್ತು ಇಷ್ಟಾರ್ಥಗಳನ್ನು ಈಡೇರಿಸಿರುವುದಕ್ಕಾಗಿ ಈ ಮೂಲಕ ನಿಮಗೆ ನಮಸ್ಕಾರವನ್ನು ಸಲ್ಲಿಸುತ್ತಿದ್ದೇವೆ ಎಂಬರ್ಥವನ್ನು ಈ ಮಂತ್ರ ನೀಡುತ್ತದೆ.

3) ವಿವಿಧ ನಾಮಗಳಿಂದ ಗಣೇಶನನ್ನು ಹೊಗಳುವ ಮಂತ್ರ:

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ |

ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ರಂ ಚತುರ್ಥಕಂ ||

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇಮ ಚ |

ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಟಮಂ ||

ನವಮಂ ಬಾಲಚಂದ್ರಂ ಚ ದಶಮಂ ತು ಗಜಾನನಂ |

ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಂ ||

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ ನರಃ

ನಚವಿಘ್ನ ಭಯಂ ತಸ್ಯ ಸರ್ವಸಿದ್ಧಿಕರಂ ಪ್ರಭೋ ||

2020 ಭಾದ್ರಪದ ಮಾಸ: ಈ ಮಾಸದಲ್ಲಿ ಮೊಸರು ಸೇವಿಸಿದ್ರೆ ಆರೋಗ್ಯ ಹಾಳಾಗೋದು ಖಚಿತ..!

ವಿದ್ಯಾರ್ಥಿ ಲಭತೆ ವಿದ್ಯಾಂ ಧನಾರ್ತಿ ಲಭತೇ ಧನಂ

ಪುತ್ರಾರ್ತಿ ಲಭತೆ ಪುತ್ರಾನ್ ಮೊಕ್ಷಾರ್ತಿ ಲಭತೇ ಗತಿಂ ||

ಜಪೆತ್ ಗಣಪತಿ ಸ್ತೋತ್ರಂ ಷದ್ಭೀರ್ ಮಾಸೈ ಫಲಂ ಲಭೇತ್ ||

ಸಂವತ್ಸರೆನ ಸಿದ್ಧಿಂ ಚ ಲಭತೆ ನಾತ್ರ ಸಂಶಯಃ ||

ಅಷ್ಟಭ್ಯೋ ಬ್ರಹ್ಮನ್ಭ್ಯಸ್ ಚ ಲಿಖಿತ್ವ ಯಃ ಸಮರ್ಪಯೇತ್ ||

ತಸ್ಯ ವಿದ್ಯಾ ಭವೇತ್ ಸರ್ವಾ ಗಣೇಶಸ್ಯ ಪ್ರಾಸದತ ||

ಗಣೇಶನ 12 ಹೆಸರುಗಳನ್ನು ಹೊಂದಿರುವ ಈ ಮೇಲಿನ ಮಂತ್ರವನ್ನು ಯಾವ ವ್ಯಕ್ತಿ ಮೂರು ಸಂಜೆ ಪ್ರಾರ್ಥಿಸುತ್ತಾನೋ ಆ ವ್ಯಕ್ತಿಯ ಮನಸ್ಸಿನಲ್ಲಿ ಭಯವೆನ್ನುವುದು ಇರುವುದಿಲ್ಲ. ಆತ ಯಾವುದೇ ತೊಂದರೆಗಳಿಗೂ ಹೆದರುವುದಿಲ್ಲ. ಆತನಲ್ಲಿನ ಆತ್ಮಸ್ಥೈರ್ಯವು ಹೆಚ್ಚಾಗುವುದು. ಆ ವ್ಯಕ್ತಿ ಜೀವನದಲ್ಲಿ ಯಶಸ್ಸಿನ ಹಾದಿಯನ್ನೇ ಅನುಸರಿಸುವನು.

Vishwa News 24

Recent Posts

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ – vishwanews24

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ…

16 hours ago

ಬದುಕಿದ್ದಾಗ ಭಿಕ್ಷುಕಿಯಾಗಿದ್ದ ವೃದ್ಧೆ ಸತ್ತ ಮೇಲೆ ಲಕ್ಷಾಧಿಪತಿ ..- vishwanews24

ಮೃತಪಟ್ಟ ಭಿಕ್ಷುಕಿಯ ಮನೆಯಲ್ಲಿ 30 ಲಕ್ಷ ರೂ. ನಗದು ಪತ್ತೆ ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು,…

19 hours ago

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ – vishwanews24

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…

19 hours ago

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ – vishwanews24

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…

20 hours ago

ಉಡುಪಿ : 25 ಗಂಟೆಗಳ ಕಾಲ ಗಾಯನ ; ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ದಾಖಲೆ – vishwanews24

25 ಗಂಟೆಗಳ ಗಾಯನದಿಂದ ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್‌ ಬುಕ್‌ಆಫ್‌ ವರ್ಲ್ಡ್ ರೆಕಾರ್ಡ್‌ ದಾಖಲೆ 'ಗೀತ ಗಂಗೋತ್ರಿʼ ಬಿರುದು ನೀಡಿ…

20 hours ago

ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ – vishwanews24

ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ [gallery columns="1" size="large" ids="117027,117028,117029,117030,117031"]

20 hours ago