2028ರಲ್ಲಿ ಶಿವಾಜಿ ಮಾದರಿಯ ಆಡಳಿತ ಮತ್ತು ಹಿಂದೂಗಳಿಗೆ ರಕ್ಷಣೆ ನೀಡುವಂತಹ ಸರಕಾರ ಬರಲಿದೆ : ಯತ್ನಾಳ್ – vishwanews24

Featured, ಉಡುಪಿ

ರಾಜ್ಯದ ಮೂಲೆ ಮೂಲೆಗೆ ತಿರುಗಿ ಸನಾತನ ಧರ್ಮದ ರಕ್ಷಣೆ ಮಾಡುವ ಕಾರ್ಯ ಮಾಡುತ್ತೇನೆ..

ಸರಕಾರ ಸಾಧ್ಯವಾದರೆ ಭ್ರಷ್ಟಾಚಾರ ಕಡಿಮೆ ಮಾಡುವ ಬಗ್ಗೆ ಅಧ್ಯಯನ ಮಾಡಲಿ..

ಸಿದ್ದರಾಮಯ್ಯರು ರಾಜ್ಯದ ಅತೀ ಭ್ರಷ್ಟ ಮುಖ್ಯಮಂತ್ರಿಯಾಗಿ ನಿವೃತ್ತರಾಗುತ್ತಾರೆ..

ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವದಲ್ಲಿ ಯತ್ನಾಳ್ ದಿಕ್ಕೂಚಿ ಭಾಷಣ

ಕುಂದಾಪುರ: ರಾಜ್ಯದ ಮೂಲೆ ಮೂಲೆಗೆ ತಿರುಗಿ ಸನಾತನ ಧರ್ಮದ ರಕ್ಷಣೆ ಮಾಡುವ ಕಾರ್ಯ ನಿರಂತರ ಮಾಡುತ್ತೇನೆ. 2028ರಲ್ಲಿ ಶಿವಾಜಿ ಮಾದರಿಯ ಆಡಳಿತ ಮತ್ತು ಹಿಂದೂಗಳಿಗೆ ರಕ್ಷಣೆ ನೀಡುವಂತಹ ನಮ್ಮ ಸರಕಾರ ಬರಲಿದೆ. ಯುಪಿ ಮಾದರಿಯಲ್ಲಿ ಬುಲ್ಲೋಜರ್‌ಕ್ರಮವೂ ಬರಲಿದೆ. ನಮ್ಮ ಧರ್ಮದ ಮೇಲೆ ಕಲ್ಲೆಸೆದರೆ ಗಣೇಶೋತ್ಸವಕ್ಕೆ ಅಡ್ಡಿಪಡಿಸಿದರೆ, ನಿಮ್ಮ ಮನೆ ಉಳಿಯಲ್ಲ ಅನ್ನುವ ಎಚ್ಚರಿಕೆ ಕೊಡುವ ಕಾಲ ಬಂದಿದೆ ಎಂದು ಕೇಂದ್ರದ ಮಾಜಿ ಸಚಿವ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಬಸ್ರೂರಿನ ಶ್ರೀ ದೇವಿ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ಜರಗಿದ, ಪೋರ್ಚುಗೀಸರ ವಿರುದ್ಧ ಛತ್ರಪತಿ ಶಿವಾಜಿ ಮಹಾರಾಜರು ಪ್ರಥಮ ನೌಕಾ ಯಾನ ಕೈಗೊಂಡು ಬಸ್ರೂರಿನಲ್ಲಿ ವಿಜಯ ಪತಾಕೆ ಹಾರಿಸಿದ ಸವಿನೆನಪಿಗೆ 361 ವರ್ಷಾಚರಣೆಯ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಅಭಿಮಾನಿ ಬಳಗ ಬಸ್ರೂರು ವತಿಯಿಂದ 13ನೇ ವರ್ಷದ ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವದಲ್ಲಿ ಅವರು ದಿಕ್ಕೂಚಿ ಭಾಷಣ ಮಾಡಿದರು.

ಇದನ್ನೂ ಓದಿ: 

ಮಂಗಳೂರು – ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್‌ನಲ್ಲಿ ಪುನಾರಾರಂಭ – vishwanews24

ಶಿವಾಜಿಯನ್ನು ಕೇವಲ ಮರಾಠಿ ರಾಜ್ಯಕ್ಕೆ ರಾಜ ಎಂದು ಬಿಂಬಿಸುವ ಇತಿಹಾಸ ಮಾತ್ರ ನಮಗೆ ಗೊತ್ತಿರುವುದು. ಆದರೆ ಶಿವಾಜಿ ಇಡೀ ಸನಾತನ ಹಿಂದೂ ಧರ್ಮದ ರಕ್ಷಣೆಗೆ ನಿಂತ ಚಕ್ರವರ್ತಿ. ಆದರೆ ಎಡಚರರು ಅವರನ್ನು ಒಂದು ಜಾತಿಗೆ ಸೀಮಿತ ಮಾಡಿದ್ದಾರೆ. ಶಿವಾಜಿ ಸ್ಮರಣೆಯು ಹಿಂದೂ ಧರ್ಮದ ನೆನಪು ಮಾಡಿಕೊಂಡಂತೆ. ನಮ್ಮ ರಾಜ್ಯದಲ್ಲೂ ಶಿವಾಜಿಗೆ ಪದೇ ಪದೇ ಅಪಮಾನ ಆಗುತ್ತಿದೆ. ಆದರೆ ಕರಾವಳಿಯ ಬಸ್ರೂರಲ್ಲಿ ಪ್ರತೀ ವರ್ಷ ಅವರ ನೆನಪು ಮಾಡಿಕೊಂಡು, ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತಿರುವುದು ಕಂಡು ಖುಷಿಯಾಗುತ್ತಿದೆ ಎಂದು ಯತ್ನಾಳ್ ಹೇಳಿದರು.

ಶಾಸಕರು ವಿದೇಶಕ್ಕೆ ಅಧ್ಯಯನ ಮಾಡಲು ಹೋಗಿಲ್ಲ. ಶಕ್ತಿ ಪ್ರದರ್ಶನಕ್ಕೆ ಹೋಗಿದ್ದಾರೆ. ನಮ ಬಳಿ ಎಷ್ಟು ಶಾಸಕರ ಒಲವಿದೆ ಎಂದು ತೋರಿಸಲು ಹೋಗಿದ್ದಾರೆ. ಡಿಕೆಶಿ ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. 2-3 ದಿನದ ಹೇಳಿಕೆಯಲ್ಲಿ ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಇದರಿಂದಾಗಿ ರಾಜ್ಯ ಸರಕಾರ ಪತನವಾದರೂ ಅಚ್ಚರಿಯಿಲ್ಲ ಎಂದು ವಿಜಯಪುರ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಇದನ್ನೂ ಓದಿ: 

ಸಾವಿನಲ್ಲೂ ಐದು ಮಕ್ಕಳ ಬಾಳಿಗೆ ಬೆಳಕಾದ 10 ತಿಂಗಳ ಮಗು : ಕೇರಳದಲ್ಲಿ ಅತ್ಯಂತ ಕಿರಿಯ ಅಂಗಾಂಗ ದಾನಿ – vishwanews24

Leave a Reply