ಮಂಗಳೂರು: “ಮೊಗವೀರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಿ” :ನಳಿನ್ ಕುಮಾರ್ ಗೆ ಮನವಿ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: “ಮೊಗವೀರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಿ” :ನಳಿನ್ ಕುಮಾರ್ ಗೆ ಮನವಿ -Vishwanews24

ಮಂಗಳೂರು: ಮೊಗವೀರ ಸಮುದಾಯವನ್ನು ಪರಿಶಿಷ್ಟ ವರ್ಗ (ಎಸ್‌ಟಿ)ಕ್ಕೆ ಸೇರ್ಪಡೆಗೊಳಿಸಬೇಕೆಂದು ನಗರದ ಬೋಳೂರಿನ ‘ಫ್ರೆಂಡ್ಸ್ ಮೊಗವೀರ’ ಸಂಘಟನೆಯ ಸದಸ್ಯರು ಸಂಸದ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರನ್ನು ತಮ್ಮ ಮಾರ್ಗದರ್ಶಕ, ಮೊಗವೀರ ಸಮಾಜದ ಮುಂದಾಳು ಹಾಗೂ ಉದ್ಯಮಿ ಜಗದೀಶ್ ಬೋಳೂರು ಅವರ ನೇತೃತ್ವದಲ್ಲಿ ಭೇಟಿಯಾಗಿ ಮನವಿ ಅರ್ಪಿಸಿದರು.

ಮಂಗಳೂರು : ಅಪ್ಪನ ಸಾವಿನಲ್ಲೂ ಎರಡು ಜೀವ ಉಳಿಸಿ ಅಪರೂಪದ ಕರ್ತವ್ಯನಿಷ್ಠೆ ಮೆರೆದ KMC ಯ ಡಾ.ಪದ್ಮನಾಭ ಕಾಮತ್‌ -Vishwanews24

ಕರ್ನಾಟಕ ರಾಜ್ಯದಲ್ಲಿ ಮೊಗವೀರ ಜನಾಂಗದ ಮಂದಿ ಸುಮಾರು 65 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಸಂವಿಧಾನದಲ್ಲಿ ಸಮುದ್ರ- ನದಿ, ಜಲಾಶಯ ಮತ್ತು ಕೆರೆಗಳ ಸನಿಹ ವಾಸಿಸುವ ಜನರಿಗೆ ಪರಿಶಿಷ್ಟ ವರ್ಗಕ್ಕೆ ಸೇರಿಸುವ ಸಂದರ್ಭ ಆದ್ಯತೆ ನೀಡಬೇಕೆಂಬ ಕುರಿತು ಉಲ್ಲೇಖಿಸಲಾಗಿದೆ ಎಂದು ಈ ಸಂದರ್ಭ ಸಂಸದರಿಗೆ ಮಾಹಿತಿ ಹಾಗೂ ಸಮಾಜದ ಸ್ಥಿತಿಗತಿ, ವೃತ್ತಿ ಬಗ್ಗೆ ತಿಳಿಸಲಾಯಿತು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮಿಳು ಸಂಸ್ಕೃತಿಯನ್ನು ಗೌರವಿಸುವುದಿಲ್ಲ : ರಾಹುಲ್ ಗಾಂಧಿ -Vishwanews24