ಕಾಪು ಎಸೈ ರಾಘವೇಂದ್ರ ಸಿ ಬಿಳ್ಕೊಡುಗೆ ಸಮಾರಂಭ:ಕಾಪುವಿನಲ್ಲಿ ಸಾರ್ವತ್ರಿಕವಾಗಿ ಡಿಸ್ಟಿಂಕ್ಷನ್ ಪಾಸ್ ಆಗಿದ್ದೀರಿ ಎಂದ – ಡಿ.ವೈ.ಎಸ್ಪಿ ವಿಜಯಪ್ರಸಾದ್ : vishwanews24

Featured, ಉಡುಪಿ

ಕಾಪು ಎಸೈ ರಾಘವೇಂದ್ರ ಸಿ ಬಿಳ್ಕೊಡುಗೆ ಸಮಾರಂಭ:ಕಾಪುವಿನಲ್ಲಿ ಸಾರ್ವತ್ರಿಕವಾಗಿ ಡಿಸ್ಟಿಂಕ್ಷನ್ ಪಾಸ್ ಆಗಿದ್ದೀರಿ ಎಂದ – ಡಿ.ವೈ.ಎಸ್ಪಿ ವಿಜಯಪ್ರಸಾದ್ : vishwanews24

ಕಾಪು: ಕಾಪು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಸಿ ಅವರ ಬೀಳ್ಕೊಡುಗೆ ಸಮಾರಂಭ ಕಾಪುವಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.

ಕಳೆದ ಒಂದುವರೆ ವರ್ಷದಿಂದ ಕಾಪು ಠಾಣೆಯಲ್ಲಿ ಸೇವೆಯನ್ನು ಸಲ್ಲಿಸಿದ ಇವರಿಗೆ ಹದಿನೈದು ದಿನಗಳ ಹಿಂದೆ
ಶಿರ್ವ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.

ಬಿಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು” ಪೊಲೀಸ್ ಇಲಾಖೆ ಎಂದಿಗೂ ತಪ್ಪು ಮಾಡಬಾರದು ಸಮಾಜವನ್ನು ತಿದ್ದುವ ಖಾಕಿ ಸಮಾಜದಲ್ಲಿ ಸಮಾಜ ಮುಖಿಯಾಗಿರಬೇಕು,ಕಾಪು ಅನ್ನುವಂತಹ ಊರಿನಲ್ಲಿ ಸೇವೆ ಮಾಡುವುದು ಒಂದು ಭಾಗ್ಯ ಸಾರ್ವಜನಿಕ ಸಹಕಾರದಿಂದ ಎಲ್ಲಾವೂ ತೃಪ್ತಿಕರ ಸೇವೆ ಆಗಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಮಾತನಾಡಿ” ಸಬ್ ಇನ್ಸ್ಪೆಕ್ಟರ್ ಹುದ್ದೆ ಸುಲಭವಾದ ಜವಬ್ದಾರಿ ಅಲ್ಲ ಅದೊಂದು ಮೈಲಿಗಲ್ಲು ಅದನ್ನ ಕಾಪುವಿನಲ್ಲಿ ಒಂದು ಹಂತ ರಾಘವೇಂದ್ರ ಅವರು ದಾಟಿ ಹೋಗಿದ್ದಾರೆ,ಮುಂದಿನ ವೃತ್ತಿ ಸೇವೆ ಯಶಸ್ವಿಯಾಗಲಿ ಎಂಬುದು ಆಶಯ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಡಿ.ವೈ.ಎಸ್ಪಿ ವಿಜಯ ಪ್ರಸಾದ್ ಮಾತನಾಡಿ” ಆಡಳಿತ ವ್ಯವಸ್ಥೆಗೆ ಕೊಂಡಿಯಾಗಿ ಕೆಲಸ ಮಾಡುವುದು ಸುಲಭವಲ್ಲ- ತಕ್ಷಣದ ಮಾಹಿತಿಗೆ ಸೂಕ್ತ ಸ್ಪಂದಿಸುವ ಕೆಲಸ ರಾಘವೇಂದ್ರ ಅವರಿಂದ ಆಗಿದೆ , ಅನಾಹುತ ನಡೆಯುವ ಮುನ್ನವೇ ಮುಂಜಾಗ್ರತೆಯಿಂದ ಮಾಡಿದ ಕಾರ್ಯ ಇವರಿಂದ ಆಗಿದೆ ಹಾಗಾಗಿ ಅಭಿನಂದನೆ ಎಂದರು.

ಕಾಪು ಎಸೈ ಶ್ರೀ ಶೈಲಾ ಮುರುಗೋಡು ಸ್ವಾಗತಿಸಿ,ಉಪನ್ಯಾಸಕ ಶಿವಣ್ಣ ಬಾಯರ್ ಕಾರ್ಯಕ್ರಮ ನಿರೂಪಿಸಿ, ಎ.ಎಸೈ ರಾಜೇಂದ್ರ ಮಣಿಯಾನಿ ಪ್ರಸ್ತಾವಿಕ ಮಾತುಗಳನ್ನಾಡಿ,ಮನು ಕುಮಾರ್ ವಂದಿಸಿದರು.

ವೇದಿಕೆಯಲ್ಲಿ ,ಪಡುಬಿದ್ರಿ ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ ,ಕಾಪು ಕ್ರೈಂ ಎಸೈ ಭರತೇಶ್,ಉಪಸ್ಥಿತರಿದ್ದರು.

Leave a Reply