ಕಾಪು: ಕಾಪು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಸಿ ಅವರ ಬೀಳ್ಕೊಡುಗೆ ಸಮಾರಂಭ ಕಾಪುವಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.
ಕಳೆದ ಒಂದುವರೆ ವರ್ಷದಿಂದ ಕಾಪು ಠಾಣೆಯಲ್ಲಿ ಸೇವೆಯನ್ನು ಸಲ್ಲಿಸಿದ ಇವರಿಗೆ ಹದಿನೈದು ದಿನಗಳ ಹಿಂದೆ
ಶಿರ್ವ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.
ಬಿಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು” ಪೊಲೀಸ್ ಇಲಾಖೆ ಎಂದಿಗೂ ತಪ್ಪು ಮಾಡಬಾರದು ಸಮಾಜವನ್ನು ತಿದ್ದುವ ಖಾಕಿ ಸಮಾಜದಲ್ಲಿ ಸಮಾಜ ಮುಖಿಯಾಗಿರಬೇಕು,ಕಾಪು ಅನ್ನುವಂತಹ ಊರಿನಲ್ಲಿ ಸೇವೆ ಮಾಡುವುದು ಒಂದು ಭಾಗ್ಯ ಸಾರ್ವಜನಿಕ ಸಹಕಾರದಿಂದ ಎಲ್ಲಾವೂ ತೃಪ್ತಿಕರ ಸೇವೆ ಆಗಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಮಾತನಾಡಿ” ಸಬ್ ಇನ್ಸ್ಪೆಕ್ಟರ್ ಹುದ್ದೆ ಸುಲಭವಾದ ಜವಬ್ದಾರಿ ಅಲ್ಲ ಅದೊಂದು ಮೈಲಿಗಲ್ಲು ಅದನ್ನ ಕಾಪುವಿನಲ್ಲಿ ಒಂದು ಹಂತ ರಾಘವೇಂದ್ರ ಅವರು ದಾಟಿ ಹೋಗಿದ್ದಾರೆ,ಮುಂದಿನ ವೃತ್ತಿ ಸೇವೆ ಯಶಸ್ವಿಯಾಗಲಿ ಎಂಬುದು ಆಶಯ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಡಿ.ವೈ.ಎಸ್ಪಿ ವಿಜಯ ಪ್ರಸಾದ್ ಮಾತನಾಡಿ” ಆಡಳಿತ ವ್ಯವಸ್ಥೆಗೆ ಕೊಂಡಿಯಾಗಿ ಕೆಲಸ ಮಾಡುವುದು ಸುಲಭವಲ್ಲ- ತಕ್ಷಣದ ಮಾಹಿತಿಗೆ ಸೂಕ್ತ ಸ್ಪಂದಿಸುವ ಕೆಲಸ ರಾಘವೇಂದ್ರ ಅವರಿಂದ ಆಗಿದೆ , ಅನಾಹುತ ನಡೆಯುವ ಮುನ್ನವೇ ಮುಂಜಾಗ್ರತೆಯಿಂದ ಮಾಡಿದ ಕಾರ್ಯ ಇವರಿಂದ ಆಗಿದೆ ಹಾಗಾಗಿ ಅಭಿನಂದನೆ ಎಂದರು.
ಕಾಪು ಎಸೈ ಶ್ರೀ ಶೈಲಾ ಮುರುಗೋಡು ಸ್ವಾಗತಿಸಿ,ಉಪನ್ಯಾಸಕ ಶಿವಣ್ಣ ಬಾಯರ್ ಕಾರ್ಯಕ್ರಮ ನಿರೂಪಿಸಿ, ಎ.ಎಸೈ ರಾಜೇಂದ್ರ ಮಣಿಯಾನಿ ಪ್ರಸ್ತಾವಿಕ ಮಾತುಗಳನ್ನಾಡಿ,ಮನು ಕುಮಾರ್ ವಂದಿಸಿದರು.
ವೇದಿಕೆಯಲ್ಲಿ ,ಪಡುಬಿದ್ರಿ ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ ,ಕಾಪು ಕ್ರೈಂ ಎಸೈ ಭರತೇಶ್,ಉಪಸ್ಥಿತರಿದ್ದರು.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…