ಕಾಪು: ಕಾಪು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಸಿ ಅವರ ಬೀಳ್ಕೊಡುಗೆ ಸಮಾರಂಭ ಕಾಪುವಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.
ಕಳೆದ ಒಂದುವರೆ ವರ್ಷದಿಂದ ಕಾಪು ಠಾಣೆಯಲ್ಲಿ ಸೇವೆಯನ್ನು ಸಲ್ಲಿಸಿದ ಇವರಿಗೆ ಹದಿನೈದು ದಿನಗಳ ಹಿಂದೆ
ಶಿರ್ವ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.
ಬಿಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು” ಪೊಲೀಸ್ ಇಲಾಖೆ ಎಂದಿಗೂ ತಪ್ಪು ಮಾಡಬಾರದು ಸಮಾಜವನ್ನು ತಿದ್ದುವ ಖಾಕಿ ಸಮಾಜದಲ್ಲಿ ಸಮಾಜ ಮುಖಿಯಾಗಿರಬೇಕು,ಕಾಪು ಅನ್ನುವಂತಹ ಊರಿನಲ್ಲಿ ಸೇವೆ ಮಾಡುವುದು ಒಂದು ಭಾಗ್ಯ ಸಾರ್ವಜನಿಕ ಸಹಕಾರದಿಂದ ಎಲ್ಲಾವೂ ತೃಪ್ತಿಕರ ಸೇವೆ ಆಗಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಮಾತನಾಡಿ” ಸಬ್ ಇನ್ಸ್ಪೆಕ್ಟರ್ ಹುದ್ದೆ ಸುಲಭವಾದ ಜವಬ್ದಾರಿ ಅಲ್ಲ ಅದೊಂದು ಮೈಲಿಗಲ್ಲು ಅದನ್ನ ಕಾಪುವಿನಲ್ಲಿ ಒಂದು ಹಂತ ರಾಘವೇಂದ್ರ ಅವರು ದಾಟಿ ಹೋಗಿದ್ದಾರೆ,ಮುಂದಿನ ವೃತ್ತಿ ಸೇವೆ ಯಶಸ್ವಿಯಾಗಲಿ ಎಂಬುದು ಆಶಯ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಡಿ.ವೈ.ಎಸ್ಪಿ ವಿಜಯ ಪ್ರಸಾದ್ ಮಾತನಾಡಿ” ಆಡಳಿತ ವ್ಯವಸ್ಥೆಗೆ ಕೊಂಡಿಯಾಗಿ ಕೆಲಸ ಮಾಡುವುದು ಸುಲಭವಲ್ಲ- ತಕ್ಷಣದ ಮಾಹಿತಿಗೆ ಸೂಕ್ತ ಸ್ಪಂದಿಸುವ ಕೆಲಸ ರಾಘವೇಂದ್ರ ಅವರಿಂದ ಆಗಿದೆ , ಅನಾಹುತ ನಡೆಯುವ ಮುನ್ನವೇ ಮುಂಜಾಗ್ರತೆಯಿಂದ ಮಾಡಿದ ಕಾರ್ಯ ಇವರಿಂದ ಆಗಿದೆ ಹಾಗಾಗಿ ಅಭಿನಂದನೆ ಎಂದರು.
ಕಾಪು ಎಸೈ ಶ್ರೀ ಶೈಲಾ ಮುರುಗೋಡು ಸ್ವಾಗತಿಸಿ,ಉಪನ್ಯಾಸಕ ಶಿವಣ್ಣ ಬಾಯರ್ ಕಾರ್ಯಕ್ರಮ ನಿರೂಪಿಸಿ, ಎ.ಎಸೈ ರಾಜೇಂದ್ರ ಮಣಿಯಾನಿ ಪ್ರಸ್ತಾವಿಕ ಮಾತುಗಳನ್ನಾಡಿ,ಮನು ಕುಮಾರ್ ವಂದಿಸಿದರು.
ವೇದಿಕೆಯಲ್ಲಿ ,ಪಡುಬಿದ್ರಿ ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ ,ಕಾಪು ಕ್ರೈಂ ಎಸೈ ಭರತೇಶ್,ಉಪಸ್ಥಿತರಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…