Featured

BIG BREAKING NEWS ಕಾಪು ಬಂಟಕಲ್ಲು ಬಿಜೆಪಿ ಕಾರ್ಯಕರ್ತನಿಗೆ ತಲವಾರು ಬೀಸಲು ಬಂದ ದುಷ್ಕರ್ಮಿಗಳು- ಸಾರ್ವಜನಿಕರಿಂದ ಗೂಸ

ಕಾಪು ಬಂಟಕಲ್ಲು ಬಿಜೆಪಿ ಕಾರ್ಯಕರ್ತನಿಗೆ ತಲವಾರು ಬೀಸಲು ಬಂದ ದುಷ್ಕರ್ಮಿಗಳು- ಸಾರ್ವಜನಿಕರಿಂದ ಗೂಸ

ಕಾಪು: ಮಜೂರು ಗ್ರಾಮ‌ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಶೆಟ್ಟಿ ಹೆರೂರು ಅವರ ಬಂಟಕಲ್ಲಿನ‌ ತನ್ನ ಅಂಗಡಿ ಬಂದ್ ಮಾಡುವ ಸಮಯದಲ್ಲಿ ರಾತ್ರಿ ಸುಮಾರು 9.15 ರ ಸುಮಾರಿಗೆ ತಲವಾರು ಹಿಡಿದು ದಾಳಿ ನಡೆಸಲು ಬಂದ ಇಬ್ಬರು ದುಷ್ಕರ್ಮಿಗಳಿಗೆ ಸಾರ್ವಜನಿಕರು ಗೂಸ ನೀಡಿರುವ ಘಟನೆ ನಡೆದಿದೆ.
ಮಜೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಹಾಗೂ ಕಳೆದ ಐದು ಅವಧಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಸಿದ್ದ ಗಣೇಶ್ ಶೆಟ್ಟಿ ಭಾಜಪದ ಸಕ್ರಿಯ ಕಾರ್ಯಕಾರ್ತರಾಗಿದ್ದಾರೆ.

ಗಣೇಶ್ ಶೆಟ್ಟಿ ಹೆರೂರು ಮಜೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ
ಬೈಕಿನಲ್ಲಿ ದುಷ್ಕರ್ಮಿಗಳ ತಲವಾರು

ಅಂಗಡಿ ಬಂದ್ ಮಾಡಿ ಹೊರಡುವ ಸಮಯದಲ್ಲಿ ಬಂದ ದುಷ್ಕರ್ಮಿಗಳು ಗಣೇಶ್ ಶೆಟ್ಟಿಯ ಮೇಲೆ‌ ಹಲ್ಲೆ ನಡೆಸಿದರು ಎನ್ನಲಾಗಿದೆ ಈ ಸಂಧರ್ಭದಲ್ಲಿ ಬೊಬ್ಬೆ ಹಾಕಿದ ಗಣೇಶ್ ಶೆಟ್ಟಿಯವರ ಸ್ವರ ಕೇಳಿ ಸ್ಥಳೀಯರು ಒಟ್ಟಾಗಿ ದುಷ್ಕರ್ಮಿಗಳಿಗೆ ಗೂಸ ನೀಡಿದರು ಎನ್ನಲಾಗಿದೆ.

ಸ್ಥಳದಲ್ಲಿ ಸಾರ್ವಜನಿಕರು ಸೇರಿದ್ದು ಶಿರ್ವ ಪೋಲಿಸರು ಘಟನಾ ಸ್ಥಳಕ್ಕಾಗಮಿಸಿದ್ದಾರೆ.

ಹಲ್ಲೆ ಹಾಗೂ ಪ್ರತಿ ಹಲ್ಲೆಗೆ ನಿಖರವಾದ ಕಾರಣ ಇನ್ನಷ್ಟೆ ಲಭ್ಯವಾಗಬೇಕಿದೆ.

           ಸ್ಥಳದಲ್ಲಿ ಜಮಾಯಿಸಿದ ಜನ

ಕ್ರೈಮ್ ಬ್ಯೂರೋ ವಿಶ್ವನ್ಯೂಸ್24

Vishwa News 24

Recent Posts

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

2 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

2 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

3 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

3 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

3 hours ago

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು  – vishwanews24

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …

4 hours ago