BREAKING NEWS – ಉಡುಪಿ : ಕಾಂಗ್ರೆಸ್ ಅಭ್ಯರ್ಥಿ ಉತ್ಸುಕನಾಗಿ ಕೆಪಿಸಿಸಿ ಗೆ ಎರಡು ಲಕ್ಷದ ಡಿಡಿ ರವಾನೆ ಮಾಡಿದ ರಮೇಶ್ ಕಾಂಚನ್ – Vishwanews24

Featured, ಉಡುಪಿ

ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಉತ್ಸುಕನಾಗಿ ಕೆಪಿಸಿಸಿ ಗೆ ಎರಡು ಲಕ್ಷದ ಡಿಡಿ ರವಾನೆ ಮಾಡಿದ ರಮೇಶ್ ಕಾಂಚನ್

ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಕಾಂಗ್ರೇಸ್ ಟಿಕೆಟ್ ಉತ್ಸುಕ ಅರ್ಜಿಗೆ ಡಿಡಿ ರವಾನೆ..

ಉಡುಪಿ: ಕರಾವಳಿಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ಜಾಸ್ತಿಯಾಗುತ್ತಿದ್ದಂತೆ ರಾಷ್ಟ್ರೀಯ ಪಕ್ಷಗಳ ಚಟುವಟಿಕೆ ಗರಿಗೆದರುತ್ತಿದೆ.

ಈ‌ ನಡುವೆ ಎರಡು ಪಕ್ಷಗಳಲ್ಲಿ ಅಭ್ಯರ್ಥಿಗಳ ಪೈಪೋಟಿಯು ಜಾಸ್ತಿ ಆಗುತ್ತಿದ್ದು ಟಿಕೆಟ್ ಗಾಗಿ ರಾಜ್ಯ ರಾಜಧಾನಿಯ ನಾಯಕರ ಹಿಂದೆ ಓಡುವ ಪಡೆಯೂ ದೊಡ್ಡದಾಗಿದೆ.

ಈ ಬೆಳವಣಿಗೆಯ ಮಧ್ಯೆ ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವವರು ಅರ್ಜಿ ಸಲ್ಲಿಸಬೇಕು. ನವೆಂಬರ್‌ 5 ರಿಂದ 15 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಜಯರಾಮ್ ಬನನ್ ಅವರಿಂದ ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ತಿರುಗಾಟಕ್ಕೆ 25 ಲಕ್ಷ ರೂ. ವೆಚ್ಚದ ಟಾಟಾ ಸಮೂಹದ ನೂತನ ಲಾರಿ ಸೇವೆ – Vishwanews24

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರ್ಜಿಗೆ 5 ಸಾವಿರ ರೂ. ನಿಗದಿ ಮಾಡಲಾಗಿದೆ. ಜೊತೆಗೆ ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು 2 ಲಕ್ಷ ರೂ., ಎಸ್‌ಸಿ, ಎಸ್‌ಟಿಯವರು 1 ಲಕ್ಷ ರೂ. ಡಿಡಿಯನ್ನು ಲಗತ್ತಿಸಬೇಕು. ಆ ಹಣವನ್ನು ಕೆಪಿಸಿಸಿ ಕಟ್ಟಡದ ನಿರ್ಮಾಣಕ್ಕೆ ಬಳಸಿಕೊಳ್ಳುತ್ತದೆ. ನಾನು ಕೂಡ ಸ್ಪರ್ಧೆ ಮಾಡಲೂ ಅರ್ಜಿ ಸಲ್ಲಿಸಬೇಕು. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಕೊಂಡವರು ಮೊದಲು ಅರ್ಜಿ ಸಲ್ಲಿಸಿ ಎಂದು ಹೇಳಿದರು.

ಹಾಗಾಗಿ ಬರೀ ಡಂಗುರ ಸಾರಿಸಿ ಬ್ಯಾನರ್ ಕಟ್ಟಿ ಟಿಕೆಟ್ ಆಕಾಂಕ್ಷಿ ಎಂದು ಊರು ಸುತ್ತುವ ಅಭ್ಯರ್ಥಿಗಳಿಗೆ ಶಾಕ್ ನೀಡಲು ಕಾಂಗ್ರೆಸ್ ಈ ಬಾರಿ ಮಹತ್ವದ ಯೋಜನೆಯನ್ನ ಕೈಗೊಂಡಿದೆ.

ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಆಗಬೇಕಾದರೂ ಕೂಡ ಆತ ಎರಡು ಲಕ್ಷ ರೂಪಾಯಿಯನ್ನು ಡಿಡಿ ಮಾಡಬೇಕು ಮತ್ತು ಅರ್ಜಿ ನಮೂನೆಗೆ 5,000  ಡಿಡಿ ಮಾಡಿ ಕೆಪಿಸಿಸಿಗೆ ಸಲ್ಲಿಸಬೇಕಾಗಿದೆ.

ಈ ಪೈಕಿ ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಎರಡು ಲಕ್ಷದ ಐದು ಸಾವಿರ ರೂಪಾಯಿ ಕೆಪಿಸಿಸಿಗೆ ರವಾನೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ರಮೇಶ್ ಕಾಂಚನ್ ಪ್ರಸ್ತುತ ಉಡುಪಿ ನಗರಸಭೆಯಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಕೌನ್ಸಿಲರ್ ಗಳಲ್ಲಿ ಇವರು ಕೂಡ ಒಬ್ಬರು ಮತ್ತು ವಿರೋಧ ಪಕ್ಷದ ನಾಯಕರಾಗಿದ್ದಾರೆ , ಕಾಂಚನ್  ಸಲ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಪುತ್ತೂರು: ಅನಾರೋಗ್ಯದಿಂದ 8ನೇ ತರಗತಿ ವಿದ್ಯಾರ್ಥಿನಿ ಸಾವು – Vishwanews24

Leave a Reply