Budget 2023 :ಒಂದು ಕೋಟಿ ರೈತರಿಗೆ ನೈಸರ್ಗಿಕ ಕೃಷಿ ಅಳವಡಿಕೆಗೆ ನೆರವು – VIshwanews24
Budget 2023 :ಒಂದು ಕೋಟಿ ರೈತರಿಗೆ ನೈಸರ್ಗಿಕ ಕೃಷಿ ಅಳವಡಿಕೆಗೆ ನೆರವು
ನವದೆಹಲಿ: ಐದನೇ ಬಾರಿಗೆ ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್ ಅವರು ಇಂದು ಸಂಸತ್ತು ಭವನದಲ್ಲಿ 2023-2024 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡುತ್ತಿದ್ದಾರೆ.
ಈ ವೇಳೆ ಬಜೆಟ್ ಮಂಡನೆ ಮಾಡುತ್ತಿರುವ ಸಚಿವೆ ನಿರ್ಮಲ ಸೀತರಾಮನ್ ಅವರು, ಮುಂದಿನ 3 ವರ್ಷಗಳಲ್ಲಿ ಒಂದು ಕೋಟಿ ರೈತರಿಗೆ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಲು ನೆರವು ಸಿಗಲಿದೆ. 10,000 ಜೈವಿಕ ಇನ್ಪುಟ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ, ವಿವಿಧ ಸರ್ಕಾರಿ ಏಜೆನ್ಸಿಗಳು, ನಿಯಂತ್ರಕರು ಮತ್ತು ನಿಯಂತ್ರಿತ ಘಟಕಗಳಿಂದ ನಿರ್ವಹಿಸಲ್ಪಡುವ ವ್ಯಕ್ತಿಗಳ ಗುರುತು ಮತ್ತು ವಿಳಾಸವನ್ನು ಸಮನ್ವಯಗೊಳಿಸಲು ಮತ್ತು ನವೀಕರಿಸಲು ಒಂದು ನಿಲುಗಡೆ ಪರಿಹಾರವನ್ನು ಡಿಜಿಲಾಕರ್ ಸೇವೆ ಮತ್ತು ಆಧಾರ್ ಅನ್ನು ಅಡಿಪಾಯದ ಗುರುತಾಗಿ ಬಳಸಿಕೊಂಡು ಸ್ಥಾಪಿಸಲಾಗುವುದು ಎಂದು ಹೇಳಿದರು.
Budget 2023 : ಇನ್ಮುಂದೆ ಎಲ್ಲಾ ಡಿಜಿಟಲ್ ವ್ಯವಹಾರಗಳಿಗೆ ‘PAN ‘ಕಡ್ಡಾಯ – Vishwanews24
