PFI ನಿಷೇಧ : ಮುಂದೆ ಯಾರೂ ಇಂತಹ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳದಂತೆ ಒಂದು ಪಾಠವಾಗಬೇಕು : ಪೇಜಾವರ ಶ್ರೀ – Vishwanews24

Featured, ಉಡುಪಿ

PFI ನಿಷೇಧ :ಮುಂದೆ ಯಾರೂ ಇಂತಹ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳದಂತೆ ಒಂದು ಪಾಠವಾಗಬೇಕು ; ಇಂತಹ ಶಕ್ತಿಗಳು ಮರು ಹುಟ್ಟು ಪಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು  : ಪೇಜಾವರ ಶ್ರೀ

ಉಡುಪಿ : ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಲವು ಸಂಘಟನೆಗಳನ್ನು ನಿಷೇಧ ಮಾಡಿರುವುದು ಮುಂದೆ ಯಾರೂ ಇಂತಹ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳದಂತೆ ಒಂದು ಪಾಠವಾಗಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಲವು ಸಂಘಟನೆಗಳನ್ನು ನಿಷೇಧ ಮಾಡಿರುವುದು ಕೇಳಿ ನೆಮ್ಮದಿಯಾಯಿತು. ಇದೊಂದು ಪಾಠ ಆಗಬೇಕು.

ಸಮಾಜದಲ್ಲಿ ಮುಂದೆ ಯಾರೂ ಕೂಡಾ ವಿದ್ವಂಸಕ ಕೃತ್ಯ, ಸಮಾಜ ವಿರೋಧಿ ಚಟುವಟಿಕೆಗಳನ್ನು ಮಾಡಬಾರದು. ಸರಕಾರವೂ ಕೂಡಾ ಕಾಲ ಕಾಲಕ್ಕೆ ಈ ಬಗ್ಗೆ ಜಾಗೃತಿ ವಹಿಸಿ ಇಂತಹ ಶಕ್ತಿಗಳು ಮರು ಹುಟ್ಟು ಪಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

PFI ನಿಷೇಧ – ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಕರ್ನಾಟಕ ಕಾಂಗ್ರೆಸ್‌ – Vishwanews24

ಹಾಗೂ ಸಾಮಾಜ ಅಥವಾ ಯಾವುದೇ ಪಕ್ಷಗಳು ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡದೆ ಅದನ್ನು ಆರಂಭದಲ್ಲಿ ನಿಯಂತ್ರಿಸಿ ಕೊನೆಗೊಳಿಸುವ ಕೆಲಸ ಮಾಡಿದರೆ ಸಮಾಜದಲ್ಲಿ ಶಾಂತಿ ನೆಮ್ಮದಿಯ ಬದುಕು ಬಾಳುವಂತಾಗತ್ತೆ. ಈ ದಿಸೆಯಲ್ಲಿ ಎಲ್ಲರೂ ಕೂಡಾ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

Leave a Reply