Scdcc ಬ್ಯಾಂಕ್ ಮತ್ತು ನವೋದಯ ಗ್ರಾ.ವಿ.ಚಾರಿಟೇಬಲ್ ಟ್ರಸ್ಟ್ – ಕಾಪು ವಿಧಾನಸಭಾ ಕ್ಷೇತ್ರದ ಆಶಾ ಕಾರ್ಯಕರ್ತೆಯರಿಗೆ ಮತ್ತು ನವೋದಯ ಪ್ರೇರಕಿಯರಿಗೆ ಕಿಟ್ ವಿತರಣೆ. vishwanews24 video
Scdcc ಬ್ಯಾಂಕ್ ಮತ್ತು ನವೋದಯ ಗ್ರಾ.ವಿ.ಚಾರಿಟೇಬಲ್ ಟ್ರಸ್ಟ್ – ಕಾಪು ವಿಧಾನಸಭಾ ಕ್ಷೇತ್ರದ ಆಶಾ ಕಾರ್ಯಕರ್ತೆಯರಿಗೆ ಮತ್ತು ನವೋದಯ ಪ್ರೇರಕಿಯರಿಗೆ ಕಿಟ್ ವಿತರಣೆ.
ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಾ.ಎಮ್ ಎನ್ ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೊರೋನಾ ವಿರುದ್ಧ ಸೇವೆ ಸಲ್ಲಿಸುತ್ತಿರುವ ಮೂರು ಸಾವಿರ ಆಶಾ ಕಾರ್ಯಕರ್ತೆಯರಿಗೆ ಪಡಿತರ ಕಿಟ್ ಮತ್ತು ಸಹಾಯ ಧನದ ಕಿಟ್ ವಿತರಣೆ ಕಾರ್ಯಕ್ರಮದ ಅಂಗವಾಗಿ ಕಾಪು ವಿಧಾನಸಭಾ ಕ್ಷೇತ್ರದ ಸುಮಾರು 206 ಆಶಾ ಕಾರ್ಯಕರ್ತೆಯರಿಗೆ ಮತ್ತು ನವೋದಯ ಪ್ರೇರಕಿಯರಿಗೆ ಕಾಪುವಿನಲ್ಲಿ ಶಾಸಕ ಲಾಲಾಜಿ ಆರ್ ಮೆಂಡನ್ ಕಿಟ್ ವಿತರಿಸಿದರು.
ತದನಂತರ ಮಾತಾಡಿದ ಅವರು”ಕೊರೋನಾ ವಿರುದ್ದ ಕೆಲಸ ಮಾಡುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವವಾಗಿದ್ದು,ಪ್ರಾಮಾಣಿಕ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಗೌರವಿಸುವುದು ಧರ್ಮ ಮತ್ತು ಕರ್ತವ್ಯ.ಉಡಪಿ ಜಿಲ್ಲೆ ಕೊರೋನಾ ಹತೋಟಿಯಲ್ಲಿದೆ ಯಾರು ಕೂಡ ಮೈಮರೆದು ವರ್ತಿಸಬಾರದು,ದಾನಿಗಳ ಸಹಕಾರದಿಂದ ಇಡೀ ಉಡುಪಿ ಜಿಲ್ಲೆಯಲ್ಲಿ ಕಿಟ್ ವಿತರಣೆ ಮತ್ತು ಊಟದ ವ್ಯವಸ್ಥೆ ಆಗುತ್ತಿದೆ ಇದೊಂದು ರಾಜ್ಯಕ್ಕೆ ಮಾದರಿ” ಎಂದರು.
ಪ್ರಸ್ವಾವಿಕ ಮಾತುಗಳನ್ನಾಡಿದ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಡಾ ದೇವಿಪ್ರಸಾದ್ ಶೆಟ್ಟಿ “ಡಾ.ಎಮ್ ಎನ್ ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕೊರೋನಾ ವಿರುದ್ದ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮತ್ತು ನವೋದಯ ಸ್ವಸಹಾಯ ಸಂಘದ ಪ್ರೇರಕಿಯರಿಗೆ ಆಹಾರ ಕಿಟ್ ವಿತರಣೆ ಮತ್ತು ಪ್ರೋತ್ಸಾಹ ಧನಸಹಾಯ ನೀಡುವ ಯೋಜನೆ ಇದಾಗಿದ್ದುಸ್ವಾರ್ಥ ರಹಿತ ಸೇವೆ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಗೆ ಹಲ್ಲೆ ಅಥಾವ ಬೆದರಿಕೆ ಹಾಕುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಕಾರ್ಯ ಮಾಡಬೇಕೆಂದರು.
ಈ ಸಂಧರ್ಭದಲ್ಲಿ ಕಾಪು ತಾಲೂಕು ತಹಶಿಲ್ದಾರ್ ಮಹಮ್ಮದ್ ಇಸಾಕ್, ಕಾಪು ಆರೋಗ್ಯ ಕೇಂದ್ರದ ವೈಧ್ಯಧಿಕಾರಿ ಸುಬ್ರಯಾ ಕಾಮತ್, SCDCC ಬ್ಯಾಂಕಿನ ನಿರ್ದೇಶಕ ರಾಜೇಶ್ ರಾವ್ ಪಾಂಗಾಳ,ಕರ್ನಾಟಕ ರಾಜ್ಯ ಹಾಲು ಮಾರಾಟ ಮಹಾ ಮಂಡಳಿಯ ನಿರ್ದೇಶಕ ಕಾಪು ದಿವಾಕರ್ ಶೆಟ್ಟಿ,ಪಡುಬಿದ್ರಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ವೈ.ಸುಧಿರ್ ಕುಮಾರ್,ಶಿರ್ವ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಕುತ್ಯಾರ್ ಪ್ರಸಾದ್ ಶೆಟ್ಟಿ,ಮೂಡಬೆಳ್ಳೆ ಸಿ.ಎ ಬ್ಯಾಂಕ್ ಅಧ್ಯಕ್ಷ ಶಿವಾಜಿ ಸುವರ್ಣ, ಕಟಪಾಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಇಂದುಶೇಖರ್ ಸುವರ್ಣ,ಕಾಪು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಮಾಧವ ಆರ್ ಪಾಲನ್,ಕಾಪು ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ಶಾಖಾ ಪ್ರಬಂಧಕ ಪ್ರಬೋದ್ಚಂದ್ರ,ನವೋದಯ ಸ್ವ.ಸಂಘದ ಮೇಲ್ವಿಚಾರಕರಾದ ಹರೀನಾಥ್,ಬಾಲಕೃಷ್ಣ ಭಟ್,ಚಂದ್ರಶೇಖರ ಉಪಸ್ಥಿತರಿದ್ದರು.
Facebook video News
Youtube video News

