SKPA ಕಾಪು ವಲಯದ ವತಿಯಿಂದ ಸದಸ್ಯರಿಗೆ ಆಹಾರಧಾನ್ಯದ ಕಿಟ್ ವಿತರಣೆ.vishwanews24
ಕಾಪು: ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ (ರಿ) ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ,ಕಾಪು ವಲಯದ ವತಿಯಿಂದ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಕಾರ್ಯಕ್ರಮ ಕಾಪು ಜೇಸಿ ಭವನದಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಅಧ್ಯಕ್ಷ ವೀರೇಂದ್ರ ಪೂಜಾರಿ ಶಿರ್ವ ಮಾತಾಡಿ ” ಎಪ್ರಿಲ್ ಮೇ ತಿಂಗಳು ಅತಿಹೆಚ್ಚು ಕಾರ್ಯಕ್ರಮಗಳು ಇರುವಂತದ್ದು ಆದರೆ ಈ ಬಾರಿ ಕೊರೋನಾ ಸಮಸ್ಯೆಯಿಂದಾಗಿ ಸಂಕಷ್ಟ ಎದುರಾಗಿದೆ ಹಾಗಾಗಿ ನಮ್ಮ ಸಂಸ್ಥೆಯ ವತಿಯಿಂದ ಅತೀ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ಆಹಾರ ಧಾನ್ಯದ ಕಿಟ್ ವಿತರಿಸುವ ಯೋಜನೆ ಇದಾಗಿದೆ ಎಂದರು.”
ಈ ಸಂಧರ್ಭದಲ್ಲಿ ಗೌರವಧ್ಯಕ್ಷ ಅನಂತ ರಾಜ್ ಭಟ್,ಕಾರ್ಯದರ್ಶಿ ಸಚಿನ್ ಉಚ್ಚಿಲ,ಕೋಶಾಧಿಕಾರಿ ಸುಜಿತ್,ಉದಯ್ ಮುಂಡ್ಕೂರು ಮೊದಲಾದವರು ಉಪಸ್ಥಿತರಿದ್ದರು.
