Featured

Union Budget 2021 : Highlights -Vishwanews24

Union Budget 2021 : Highlights -Vishwanews24

ನವದೆಹಲಿ: ಕರೋನದ ದಿಂದ ಕಂಗೆಟ್ಟಿರುವ ದೇಶದ ಅರ್ಥಿಕ ಪರಿಸ್ಥಿತಿಯ ನಡುವೆ ಇಂದು 2021-22ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ ಅವರು ಮಂಡನೆ ಮಾಡುತ್ತಿದ್ದಾರೆ.

ಗೀಗಾ ವ್ಯಾಟ್ಸ್ ವಿದ್ಯುತ್ ಸಂಪರ್ಕ ಪೂರೈಕೆ. ಎಲ್ಲರಿಗೂ ವಿದ್ಯುತ್ ಸಿಗುವಂತೆ ಹಲವು ಯೋಜನೆ ಜಾರಿ.

ಬೆಂಗಳೂರು ನಮ್ಮ ಮೆಟ್ರೋ ಫೇಸ್ 2ಎ ಮತ್ತು 2ಬಿಯ 59 ಕಿ.ಮೀಗೆ 14 ಸಾವಿರ ಅನುದಾನ.

ಕೇರಳದ ಕೊಚ್ಚಿ ಮೆಟ್ರೋ ಫೇಸ್ 2ಗೆ ವಿಶೇಷ ಅನುದಾನ.

ಹಳ್ಳಿಯಿಂದ ನಗರ ಪ್ರದೇಶಗಳಿಗೆ ತೆರಳು ಸುಲಭವಾಗುವಂತೆ ಪ್ರಯಾಣ ಸೌಕರ್ಯಕ್ಕೆ ಒತ್ತು. ಮೆಟ್ರೋ ನಿರ್ಮಾಣ ಯೋಜನೆ ಮತ್ತಷ್ಟು ವಿಸ್ತರಣೆ.

ಪ್ರಯಾಣಿಕರ ಸುರಕ್ಷತೆ ಹಾಗೂ ಆರಾಮಾದಾಯಿಕ ಪ್ರಯಾಣಕ್ಕೆ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ

46 ಸಾವಿರ ಕಿ.ಮೀ. ಬ್ರಾಡ್‌ಗೇಜ್ ಪರಿವರ್ತನೆಗೆ ಅನುದಾನ.

ನ್ಯಾಷನಲ್ ರೈಲ್ವೇ ಪ್ಲ್ಯಾನ್.

ಲಾಗಿಸ್ಟಿಕ್ ಸೌಲಭ್ಯ ಸರಳಗೊಳಿಸಲು ಸರಕಾರ ಆದ್ಯತೆ.

ಕೊಲ್ಕತ್ತಾ-ಸಿಲಿಗುರಿ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ. ತಮಿಳುನಾಡು ರಸ್ತೆಗಳಿಗೆ ಅನುದಾನ. ವಿಧಾನಸಭಾ ಚುನಾವಣೆ ನಡೆಯುವ ರಾಜ್ಯಗಳಿಗೆ ವಿಶೇಷ ಆದ್ಯತೆ ನೀಡಿದ ವಿತ್ತ ಸಚಿವೆ.

ಮುಂಬೈ-ಕನ್ಯಾಕುಮಾರಿ ಕಾರಿಡಾರ್‌ಗೆ ಹೆಚ್ಚಿನ ಅನುದಾನ

ತಮಿಳುನಾಡಿನಲ್ಲಿ ರಾಜ್ಯ ರಸ್ತೆ ಹೈ ವೇ ಅಭಿವೃದ್ಧಿಗೆ ಒತ್ತು. ಹಲವು ಕಾರಿಡಾರ್‌ ಅಭಿವೃದ್ಧಿಗೆ ಒತ್ತು

13 ಸಾವಿಕ ಕಿ.ಮೀ ರಸ್ತೆಗೆ ಆಗಲೇ ಅನುದಾನ ಬಿಡುಗಡೆ. ಇದರಲ್ಲಿ 3,800 ಕಿ.ಮೀ. ರಸ್ತೆ ಅಭಿವೃದ್ಧಿಯಾಗಿದೆ. ಈ ಯೋಜನೆ ಮತ್ತಷ್ಟು ವಿಸ್ತರಿಸಲು ಒತ್ತು.

20 ಸಾವಿರ ಕೋಟಿ ಬಂಡವಾಳದೊಂದಿಗೆ ವಿತ್ತೀಯ ಸಂಸ್ಥೆ ಸ್ಥಾಪನೆ

ಅಪೌಷ್ಠಿಕತೆ ವಿರುದ್ಧ ಹೋರಾಡಲು ಮಿಷನ್ ಪೋಷಣ್ 2.0 ಘೋಷಣೆ
4,378 ಸ್ಥಳೀಯ ಸಂಸ್ಥೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ
ನಾಲ್ಕು ವೈರಾಲಜಿ ಇನ್ಸ್ಟಿಟ್ಯೂಟ್ ಸ್ಥಾಪನೆ
ಶುದ್ಧ ಕುಡಿಯುವ ನೀರು ಪೂರೈಸಲು ವಿಶೇಷ ಯೋಜನೆ
2.86 ಕೋಟಿ ನಗರದ ಮನೆಗಳಿಗೆ ಹೊಸದಾಗಿ ನಲ್ಲಿ ಜೋಡಣೆ
500 ನಗರಗಳು ಅಮೃತ ನಗರಗಳೆಂದು ಘೋಷಣೆ

ಆತ್ಮನಿರ್ಭರ್ ಪ್ಯಾಕೇಜ್ ಬಡವರು ಹಾಗೂ ರೈತರ ಪರವಾಗಿತ್ತು.
ಲಾಕ್‌ಡೌನ್ ವೇಳೆ 27.1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆಯಾಗಿದೆ.
ಜಿಡಿಪಿಯ ಶೇ. 13ರಷ್ಟು ವಿಶೇಷ ಪ್ಯಾಕೇಜ್ ಘೋಷಣೆಯಾಗಿದೆ.
ಕೊರೋನಾಗೆ ಎರಡು ಸ್ವದೇಶಿ ವ್ಯಾಕ್ಸಿನ್ ಉತ್ಪಾದನೆ

ಲಾಕ್‌ಡೌನ್ ವೇಳೆ ಐದು ಮಿನಿ ಬಜೆಟ್ ಘೋಷಣೆಯಾಗಿದೆ
ನಮ್ಮ ದೇಶದಲ್ಲಿ ಹಲವು ಮೈಲಿಗಲ್ಲಿಗೆ 2021 ಸಾಕ್ಷಿಯಾಗಲಿದೆ
ಕೊರೋನಾ ಕಾಲದಲ್ಲಿ ತೋರಿದ ದೃಢತೆಗೆ ಪ್ರತಿಯೊಬ್ಬರಿಗೂ ಶಿರಬಾಗಿ ನಮಿಸುವೆ
ಇಂದಿನ ಬಜೆಟ್ ಆತ್ಮ ನಿರ್ಭರ್ ಭಾರತದ ದೃಷ್ಟಿಕೋನ ತೋರಿಸುತ್ತದೆ

ಭಾರತ ಪ್ರಪಂಚದ ವ್ಯಾಪಾರ ಕೇಂದ್ರವಾಗಿತ್ತು.
ಹಲವು ಜಾಗತಿಕ ಪ್ರಯತ್ನದ ನೇತೃತ್ವವನ್ನು ಭಾರತ ವಹಿಸಿದೆ
ಕೃಷಿ ಮೂಲಸೌಲಭ್ಯ ಹೆಚ್ಚಿಸುವಲ್ಲಿ ನಮ್ಮ ಸರ್ಕಾರ ದೃಢ ಮನಸ್ಸು ಹೊಂದಿದೆ.
2015-16 ಬಜೆಟ್‌ನಲ್ಲಿ 13 ವಾಗ್ದಾನಗಳನ್ನು ನಾವು ಮಾಡಿದ್ದೆವು
ಕಳೆದ ವರ್ಷದ ಬಜೆಟ್ 6 ಸ್ತಂಭಗಳ ಮೇಲೆ ನಿಂತಿತ್ತು

ಆರೋಗ್ಯ ಸೇವೆಗಳ ಮೇಲಿನ ಹೂಡಿಕೆ ದೊಡ್ಡಮಟ್ಟದಲ್ಲಿ ಹೆಚ್ಚಳ
‘ಪ್ರಧಾನಿ ಆತ್ಮನಿರ್ಭರ್ ಸ್ವಸ್ಥ ಭಾರತ ಯೋಜನೆ’ ಘೋಷಣೆ
ಈ ಘೋಷಣೆಗೆ 64,184 ಕೋಟಿ. ರೂ. ಅನುದಾನ
ಆರೋಗ್ಯ ಮೂಲಭೂತ ಸೌಕರ್ಯಸುಧಾರಣೆಗೆ ಬಳಕೆ
ಹೊಸ ಆರೋಗ್ಯ ಕೇಂದ್ರಗಳ ನಿರ್ಮಾಣ
11 ರಾಜ್ಯಗಳಲ್ಲಿ 17 ಸಾವಿರ ಗ್ರಾಮೀಣ ಆರೋಗ್ಯ ಕೇಂದ್ರಗಳ ಸ್ಥಾಪನೆ
602 ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
5 ಹೊಸ ರೋಗ ನಿಯಂತ್ರಣ ಕೇಂದ್ರಗಳ ನಿರ್ಮಾಣ
15 ತುರ್ತು ಶಸ್ತ್ರ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ

ಏಳು ವರ್ಷಗಳಲ್ಲಿ 3 ಹೊಸ ಟೆಕ್ ಪಾರ್ಕ್ ಸ್ಥಾಪನೆ.

ಮೂಲ ಸೌಕರ್ಯ ಹೆಚ್ಚಲು ಆರ್ಥಿಕ ಕ್ಷೇತ್ರದಿಂದ ಹೆಚ್ಚು ಅನುದಾನ ಬಿಡುಗಡೆ ಒತ್ತು.

ಕೊರೋನಾ ಲಸಿಕೆಗೆ 35 ಸಾವಿರ ಕೋಟಿ ಮೀಸಲು

ಪರಿಸರ ಸಂರಕ್ಷಿಸಲು, ವಾಹನಗಳಿಗೆ ಫಿಟ್‌ನೆಸ್ ಟೆಸ್ಟ್. 15 ವರ್ಷಗಳ ನಂತರ ಅದರ ಆರೋಗ್ಯ ನೋಡಿ, ಗುಜರಿಗೆ. ಎಲ್ಲೆಡೆ ಆಟೋಮೇಷನ್ ಟೆಸ್ಟ್.

ಪರಿಸರ ಸಂರಕ್ಷಿಸಲು, ವಾಹನಗಳಿಗೆ ಫಿಟ್‌ನೆಸ್ ಟೆಸ್ಟ್. 15 ವರ್ಷಗಳ ನಂತರ ಅದರ ಆರೋಗ್ಯ ನೋಡಿ, ಗುಜರಿಗೆ. ಎಲ್ಲೆಡೆ ಆಟೋಮೇಷನ್ ಟೆಸ್ಟ್.

ನಗರ ಪ್ರದೇಶದಲ್ಲಿ ಸ್ವಚ್ಛೆತೆಗೆ ಮೊದಲ ಆದ್ಯತೆ.
ತ್ಯಾಜ್ಯ ನೀರಿನ ಮರು ಬಳಕೆಕೆ ಒತ್ತು. ತ್ಯಾಜ್ಯ ವಸ್ತು ನಿವಾರಣೆ ಸೂಕ್ತ ಕ್ರಮ.
ಸ್ವಚ್ಛ ಭಾರತ ಯೋಜನೆ ಜಾರಿಗೆ ಹೆಚ್ಚಿನ ಒತ್ತು. ಹೆಚ್ಚಿನ ಅನುದಾನ ಬಿಡುಗೆ

ಎಲ್ಲರಿಗೂ ಸ್ವಚ್ಛ ನೀರು ಒದಿಗಿಸಿ, ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಜಲ ಜೀವನ್ ಯೋಜನೆ ಜಾರಿಗೆ.

ಸಾರ್ವಜನಿಕ ಆರೋಗ್ಯ ಕೇಂದ್ರಗಳ ಅಪ್‌ಗ್ರೇಡಿಗೆ ಒತ್ತು.

ಆತ್ಮನಿರ್ಭರ್ ಪ್ಯಾಕೇಜ್ ಬಡವರು ಹಾಗೂ ರೈತರ ಪರವಾಗಿತ್ತು.
ಲಾಕ್‌ಡೌನ್ ವೇಳೆ 27.1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆಯಾಗಿದೆ.
ಜಿಡಿಪಿಯ ಶೇ. 13ರಷ್ಟು ವಿಶೇಷ ಪ್ಯಾಕೇಜ್ ಘೋಷಣೆಯಾಗಿದೆ.
ಕೊರೋನಾಗೆ ಎರಡು ಸ್ವದೇಶಿ ವ್ಯಾಕ್ಸಿನ್ ಉತ್ಪಾದನೆ

ಬಡವರಿಗೆ 18 ಮಿಲಿಯನ್ ಉಚಿತ ಗ್ಯಾಸ್ ವಿತರಣೆ
ನಾಲ್ಕು ಮಿಲಿಯನ್ ರೈತರಿಗೆ ನೇರ ಹಣ ವರ್ಗಾವಣೆ
ಕೊರೋನಾ ಹಲವು ಸವಾಲುಗಲನ್ನು ಎದುರಿಸಲು ಕಲಿಸಿದೆ
ಲಾಕ್‌ಡೌನ್ ವೇಳೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ
ದೇಶದಲ್ಲಿ ಆತ್ಮನಿರ್ಭರ್ ಯೋಜನೆ ಜಾರಿಯಾಗಿದೆ.

Vishwa News 24

Recent Posts

ನಾನು ಯಾವುದಕ್ಕೂ ಹೆದರುವುದಿಲ್ಲ ; ಡಿಸೆಂಬರ್‌ನಲ್ಲಿ ತಾಯ್ನಾಡಿಗೆ ಮರಳಲಿದ್ದೇನೆ :  ಶೇಖ್ ಹಸೀನಾ – vishwanews24

ನಾನು ಯಾವುದಕ್ಕೂ ಹೆದರುವುದಿಲ್ಲ ; ಡಿಸೆಂಬರ್‌ನಲ್ಲಿ ತಾಯ್ನಾಡಿಗೆ ಮರಳಲಿದ್ದೇನೆ :  ಶೇಖ್ ಹಸೀನಾ ನವದೆಹಲಿ,:ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು, ಯಾವುದಕ್ಕೂ ನಾನು…

8 hours ago

ಕೊಟೇಶ್ವರ ರಸ್ತೆ ಅಪಘಾತ : ಲಾರಿ ಚಾಲಕನ ಬಂಧನ – vishwanews24

ಕೊಟೇಶ್ವರ ರಸ್ತೆ ಅಪಘಾತ : ಅತಿವೇಗ ಅಜಾಗರೂಕತೆಯ ಚಾಲನೆ ; ಬೈಕ್ ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನ ಬಂಧನ ಉಡುಪಿ:…

8 hours ago

ಮೈಸೂರು : ಅಕ್ಟೋಬರ್ 11ರಂದು ವಿಶ್ವವಿಖ್ಯಾತ ಮೈಸೂರು ದಸರಾ  ಉದ್ಘಾಟನೆ – vishwanews24

ಮೈಸೂರು : ಅಕ್ಟೋಬರ್ 11ರಂದು ವಿಶ್ವವಿಖ್ಯಾತ ಮೈಸೂರು ದಸರಾ  ಉದ್ಘಾಟನೆ ಬೆಂಗಳೂರು/ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ  ಉದ್ಘಾಟನೆಗೆ ಕೊನೆಗೂ ದಿನಾಂಕ…

8 hours ago

ಚೆಕ್ ಬೌನ್ಸ್ ಪ್ರಕರಣ : ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳ ಜೈಲು ಶಿಕ್ಷೆ – vishwanews24

ಚೆಕ್ ಬೌನ್ಸ್ ಪ್ರಕರಣ : ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳ ಜೈಲು ಶಿಕ್ಷೆ ನವದೆಹಲಿ: ಚೆಕ್ ಬೌನ್ಸ್…

8 hours ago

ರೈಲು ಟಿಕೆಟ್‌ಗೆ ಹೊಸ ನಿಯಮ: ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ಹೊಸ ಮಾರ್ಗಸೂಚಿ ಪ್ರಕಟ – vishwanews24

ರೈಲಿನಲ್ಲಿ ಸಂಚರಿಸುವ ಮುನ್ನ ಹೊಸ ನಿಯಮ ತಿಳ್ಕೊಳ್ಳಿ : ಇನ್ಮುಂದೆ ಮೊಬೈಲ್​ನಲ್ಲಿ ಟಿಕಟ್ ತೋರಿಸಿದರೆ ದಂಡ ಫಿಕ್ಸ್ ನವದೆಹಲಿ :ಡಿಜಿಟಲ್…

8 hours ago

ಸುರತ್ಕಲ್‌ : ಅಕ್ರಮವಾಗಿ ನೆಲೆಸಿದ್ದ 6 ಮಂದಿ ಬಾಂಗ್ಲಾದೇಶಿಗರ ಪತ್ತೆ , ಗಡಿಪಾರಿಗೆ ಪೊಲೀಸರ ಸಿದ್ಧತೆ – vishwanews24

ಸುರತ್ಕಲ್‌ : ಅಕ್ರಮವಾಗಿ ನೆಲೆಸಿದ್ದ 6 ಮಂದಿ ಬಾಂಗ್ಲಾದೇಶಿಗರ ಪತ್ತೆ , ಗಡಿಪಾರಿಗೆ ಪೊಲೀಸರ ಸಿದ್ಧತೆ ಮಂಗಳೂರು: ನಗರದ ಸುರತ್ಕಲ್ ಪೊಲೀಸ್…

9 hours ago