ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಮೆಟ್ರೋ ಮ್ಯಾನ್‌‌‌ ಖ್ಯಾತಿಯ ಇ . ಶ್ರೀಧರನ್‌‌ -Vishwanews24

Featured, ರಾಷ್ಟ್ರ ನ್ಯೂಸ್

ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಮೆಟ್ರೋ ಮ್ಯಾನ್‌‌‌ ಎಂದೇ ಖ್ಯಾತಿಯ ಇ . ಶ್ರೀಧರನ್‌‌ -Vishwanews24

ಮಲಪ್ಪುರಂ: “ಮೆಟ್ರೋ ಮ್ಯಾನ್‌‌‌ ಎಂದೇ ಖ್ಯಾತಿ ಪಡೆದಿರುವ ಇ.ಶ್ರೀಧರನ್‌‌ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು” ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

“ಕೇರಳದ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್‌‌ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ವಿಜಯಯಾತ್ರೆಯು ಮಲಪ್ಪುರಂನ ಚಂಗರಮಕುಳಂ ತಲುಪಿದ ಸಂದರ್ಭ ಗುರುವಾರ ರಾತ್ರಿ ಶ್ರೀಧರನ್‌ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ” ಎಂದು ನಾಯಕರು ತಿಳಿಸಿದ್ದಾರೆ.

ಕಾಪು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆಗೆ ಗುರ್ಮೆ ಸುರೇಶ್ ಶೆಟ್ಟಿಯಿಂದ ಗೌರವರ್ಪಣೆ -Vishwanews24

ಶ್ರೀಧರನ್‌ ಅವರು ಕೇಂದ್ರ ಸಚಿವ ಆರ್‌.ಕೆ.ಸಿಂಗ್‌ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ನಂತರ ಮಾತನಾಡಿದ ಶ್ರೀಧರನ್‌ ಅವರು, “ಇದು ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ. ಪಕ್ಷದಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಸುರೇಂದ್ರನ್‌ ಅವರಿಗೆ ಧನ್ಯವಾದಗಳು” ಎಂದಿದ್ದಾರೆ.

ಬೆಳ್ತಂಗಡಿ : ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಧರ್ಮಸ್ಥಳದ ಚೇತನಾ ಆಯ್ಕೆ -Vishwanews24

ಮೆಟ್ರೋ ಮ್ಯಾ‌‌ನ್‌ ಎಂದು ಜನಪ್ರಿಯರಾಗಿರುವ ಶ್ರೀಧರನ್‌ ಅವರು ಬಿಜೆಪಿ ಸೇರುವುದಾಗಿ ತಿಳಿಸಿದ್ದರು. ಎಪ್ರಿಲ್‌-ಮೇ ತಿಂಗಳಿನಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ತಿಳಿಸಿದ್ದರು.

ಕಾಂಗ್ರೆಸ್‌ ‘ಸಂಘಟನೆಯ ಜತೆ ಬಲವರ್ಧನೆಗೆ ಮಾ. 3ರಿಂದ ಪಕ್ಷದ ಶಾಸಕರಿಲ್ಲದ 100 ಕ್ಷೇತ್ರಗಳಲ್ಲಿ ಪಾದಯಾತ್ರೆ: ಡಿ.ಕೆ. ಶಿವಕುಮಾರ್‌ -Vishwanews24