ಅಯೋದ್ಯ ಶ್ರೀ ಸುರೇಶ್ ಆರ್ ಶೆಟ್ಟಿಯವರಿಗೆ ಮಾತೃವಿಯೋಗ:-Vishwanews24

ಉಡುಪಿ

ಅಯೋದ್ಯ ಶ್ರೀ ಸುರೇಶ್ ಆರ್ ಶೆಟ್ಟಿಯವರಿಗೆ ಮಾತೃವಿಯೋಗ:-Vishwanews24

ಕಾಪು: ಕಾಪುವಿನ ಉದ್ಯಮಿ ಗುತ್ತಿಗೆದಾರ ಅಯೋಧ್ಯ ಸುರೇಶ್ ಶೆಟ್ಟಿ ಅವರ ಮಾತೃಶ್ರೀ ಯವರಾದ ಶ್ರೀಮತಿ ಸೀತಾ ಆರ್ ಶಕ್ತಿ ಅವರು ಸೋಮವಾರ ಬೆಳಗ್ಗೆ ದೈವಾದೀನರಾಗಿದ್ದಾರೆ.
ಮೃತರ ಅಂತ್ಯಸಂಸ್ಕಾರ ಪ್ರಕ್ರಿಯೆ ಸೋಮವಾರ ಸಂಜೆ 7 ಗಂಟೆಗೆ ಮೃತರ ಸ್ವಗೃಹ ಅಯೋಧ್ಯ ಕಾಪು ಇಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಗುರ್ಮೆ ಸುರೇಶ್ ಶೆಟ್ಟಿ , ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲಾಜಿ ಯೋಗೀಶ್ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.