ಇಂಧನ ಸಚಿವರ ಜಿಲ್ಲೆಯಲ್ಲಿ ಪ್ರತಿದಿನ ಲೋಡ್ ಶೆಡ್ಡಿಂಗ್- ಮಧ್ಯರಾತ್ರಿ ಕರೆಂಟ್ ತೆಗೆದು ಯಾಮಾರಿಸುವ ಮೆಸ್ಕಾಂ;-vishwanews24

Featured, ಉಡುಪಿ

ಇಂಧನ ಸಚಿವರ ಜಿಲ್ಲೆಯಲ್ಲಿ ಪ್ರತಿದಿನ ಲೋಡ್ ಶೆಡ್ಡಿಂಗ್- ಮಧ್ಯರಾತ್ರಿ ಕರೆಂಟ್ ತೆಗೆದು ಯಾಮಾರಿಸುವ ಮೆಸ್ಕಾಂ;-vishwanews24

ಕಾಪು: ಕಳೆದ ಹದಿನೈದು ದಿನಗಳಿಂದ ಕಾಪು ಕಾರ್ಕಳ ಸೇರಿದಂತೆ ಉಡುಪಿ ಜಿಲ್ಲೆಯ ವಿವಿಧ ಭಾಗದಲ್ಲಿ ದಿಢೀರ್ ಲೋಡ್ ಶೆಡ್ಡಿಂಗ್ ಆರಂಭವಾಗಿದೆ.ವಾರದ ಏಳು ದಿನವೂ ದಿನಕ್ಕೆ ಒಂದೆರಡು ಗಂಟೆ ಕರೆಂಟ್ ತೆಗೆದು ಮೆಸ್ಕಾಂ ಜನರಿಗೆ ಯಾಮಾರಿಸುತ್ತಿದೆ.


ಉಡುಪಿ ಜಿಲ್ಲೆಯ ಇಂಧನ ಸಚಿವ ಸುನಿಲ್ ಕುಮಾರ್ ಅವರ ಜಿಲ್ಲೆಯಲ್ಲಿಯೇ ಈ ರೀತಿಯ ಸಮಸ್ಯೆಯಾದರೇ ಈ ವ್ಯವಸ್ಥೆಯನ್ನು ಕೇಳುರ‍್ಯಾರು ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಮೂಡಿದೆ.
ಪ್ರತಿದಿನ ಮಧ್ಯರಾತ್ರಿಯ ಸಮಯದಲ್ಲಿ ಜನಸಾಮಾನ್ಯರು ನಿದ್ದೆಗೆ ಜಾರುವುದು ಸಾಮಾನ್ಯ ಅದೇ ಸಮಯವನ್ನು ಟಾರ್ಗೆಟ್ ಮಾಡಿದೆ ವಿನಾಕಾರಣ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆಂಬ ಆರೋಪವು ಕೇಳಿ ಬರುತ್ತಿದೆ.

ಟೀಕೆ ಮಾಡಿದ ಕಾಂಗ್ರೇಸ್
ಸುನಿಲ್ ಕುಮಾರ್ ಉತ್ತರದ ಕಾಶಿಯಂತೆ ಕಾಪು ಕೂಡ ನವ ಕಾಪು ಆಗಬೇಕೆಂದು ಬರೀ ಭಾಷಣದಲ್ಲಿ ಹೇಳಿದ ಹಾಗೇ ಅಲ್ಲ, ಸರಿಯಾಗಿ ಕರೆಂಟ್ ಉತ್ಪಾದನೆಯಾಗುವ ಜಿಲ್ಲೆಗೆ ದಿನದ 24 ಗಂಟೆ ನೀಡಲಾಗದವರು ಇನ್ನೂ ಕಾಶಿಯನ್ನು ಕಾಪುವಿಗೆ ಹೋಲಿಸುವುದು ವಿಪರ್ಯಾಸವೆ ಸರಿ ಬರೀ ಚುನಾವಣೆಯ ಗಿಮಿಕ್ಕು ಎಂದು ಕಾಂಗ್ರೇಸ್ ಟೀಕೆ ಮಾಡಿದೆ.