ಇನ್ನು ಮುಂದೆ ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ -Vishwanews24
ಬೆಂಗಳೂರು: 60 ವರ್ಷ ದಾಟಿದವರು ಇನ್ನು ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಸ್ವಯಂ ಸರಕಾರವೇ ಫಲಾನುಭವಿಗಳನ್ನು ಗುರುತಿಸಿ ಮನೆಗೇ ಪಿಂಚಣಿ ಕಳುಹಿಸುತ್ತದೆ.
ಕಂದಾಯ ಸಚಿವ ಆರ್. ಆಶೋಕ ಅವರು ಬುಧವಾರ ಜಿಲ್ಲಾಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
”ಇನ್ನೊಂದು ವಾರದೊಳಗೆ ಈ ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ಚಾಲನೆ ನೀಡಲಾಗುವುದು. ಅಂಚೆ ಇಲಾಖೆಯ ಸಹಕಾರದೊಂದಿಗೆ ಯೋಜನೆ ಸಾಕಾರಗೊಳ್ಳಲಿದ್ದು, ನಾನೇ ಖುದ್ದಾಗಿ 3000 ಫಲಾನುಭವಿಗಳ ವಿಳಾಸಕ್ಕೆ ಆಯ್ಕೆ ಪತ್ರವನ್ನು ಪೋಸ್ಟ್ ಮಾಡುವ ಮೂಲಕ ಚಾಲನೆ ನೀಡುತ್ತೇನೆ,” ಎಂದು ಹೇಳಿದರು.
ಮನೆ ಬಾಗಿಲಿಗೇ ಅಂಚೆ
ಅರ್ಹ ಫಲಾನುಭವಿಗಳಿಗೆ ಅಂಚೆ ಇಲಾಖೆ ಮೂಲಕ ಮನೆಗೇ ಹಣವನ್ನು ತಲುಪಿಸಲಾಗುತ್ತದೆ. ರಾಜ್ಯದಲ್ಲಿ ಪ್ರತಿ ಎರಡು ಗ್ರಾಮಕ್ಕೊಂದರಂತೆ ಇರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿ. (ಐಪಿಪಿಬಿಎಲ್) ಇದರ ಸಿಬ್ಬಂದಿಗಳು ಫಲಾನುಭವಿಗಳ ಮನೆಗೇ ಹೋಗಿ ಖಾತೆಯನ್ನು ತೆರೆಯಲಿದ್ದಾರೆ. ಫಲಾನುಭವಿಗಳು ತಮ್ಮ ಬೆರಳಚ್ಚು ನೀಡಿದರೆ ಸಾಕು, ಮೊದಲೇ ನೀಡಿದ್ದ ಆಧಾರ್ ಸಂಖ್ಯೆ ಆಧಾರದಲ್ಲಿ ವಿಳಾಸವನ್ನು ಗುರುತಿಸಿ ಖಾತೆ ರೂಪುಗೊಳ್ಳುತ್ತದೆ.
ಫಲಾನುಭವಿಗಳಿಗೆ ಅಂಚೆಯಲ್ಲಿ ಸಂದೇಶ
ಆಧಾರ್ ಕಾರ್ಡ್ ಆಧಾರದ ಮೇಲೆ ಯಾರಿಗೆ ಅರವತ್ತು ವರ್ಷ ಭರ್ತಿಯಾಗಿದೆ ಎಂಬುದನ್ನು ರಾಜ್ಯ ಸರಕಾರವೇ ಪತ್ತೆ ಹಚ್ಚುತ್ತದೆ. ವೃದ್ಧಾಪ್ಯ ವೇತನಕ್ಕೆ ನಿಗದಿಪಡಿಸಿದ ಆದಾಯ ಮಿತಿ, ರೇಷನ್ ಕಾರ್ಡ್ ಮತ್ತಿತರ ಮಾನದಂಡಗಳ ಆಧಾರದಲ್ಲಿ ವ್ಯಕ್ತಿಗಳು ಅರ್ಹರೆಂದು ಕಂಡುಬಂದರೆ ಸರಕಾರವೇ ಅಂಚೆ ಮೂಲಕ ಪತ್ರ ಕಳಿಸಿ ವೃದ್ಧಾಪ್ಯ ವೇತನ ಪಡೆಯಲು ಅರ್ಹರಾಗಿದ್ದೀರಿ ಎಂಬ ಸಂದೇಶವನ್ನು ರವಾನಿಸುತ್ತದೆ.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
