ಇಲ್ಲಿರುವ ವಿಷ ಬೀಜವನ್ನು ಕಿತ್ತುಹಾಕಿ ಮುಂದಿನ ದಿನಗಳಲ್ಲಿ ಕೆಂಪುಕೋಟೆಯಲ್ಲಿ ನಾವು ಭಾಷಣ ಮಾಡುತ್ತೇವೆ :ಡಿ. ಕೆ ಶಿವಕುಮಾರ್ -Vishwanews24
ಬೆಂಗಳೂರು: ರಾಷ್ಟ್ರದಲ್ಲಿ ಬದಲಾವಣೆ ಬೇಕಿದ್ದು, ಇಲ್ಲಿರುವ ವಿಷ ಬೀಜವನ್ನು ಕಿತ್ತುಹಾಕಿ ಮುಂದಿನ ದಿನಗಳಲ್ಲಿ ಕೆಂಪುಕೋಟೆಯಲ್ಲಿ ನಾವು ಭಾಷಣ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಭವನದಲ್ಲಿ ನಡೆದ 74ನೇ ಸ್ವಾತಂತ್ರೋತ್ಸವದ ಆಚರಣೆಯಲ್ಲಿ ಮಾತನಾಡಿದ ಅವರು, ಗಾಂಧೀಜಿಯವರ ತತ್ವಗಳನ್ನು ನಾವೆಲ್ಲರು ಅನುಸರಿಸಬೇಕು ಮತ್ತು ಸ್ವಾತಂತ್ರ್ಯಕ್ಕಾಗಿ ಪ್ರಾಣಕೊಟ್ಟವರನ್ನು ಸ್ಮರಿಸಬೇಕು. ದೇಶದೆಲ್ಲೆಡೆ ಆಗುವ ಅಸಮಾನತೆ ನಿವಾರಿಸಿ ಸಮಾನತೆ ಸಾಧಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದು ದೇಶದ ಐಕ್ಯತೆಯನ್ನು ನಾವು ಉಳಿಸಬೇಕಿದೆ ಎಂದು ಹೇಳಿದರು.
ಬಿಜೆಪಿಯವರು ಕೋಮುವಾದ ಮತ್ತು ದೇಶದಲ್ಲಿ ದ್ವೇಷದ ಬೀಜ ಬಿತ್ತುತ್ತಿದ್ದು, ಈ ವಿಷ ಬೀಜವನ್ನು ನಾವು ಕಿತ್ತುಹಾಕಿ ರಾಷ್ಟ್ರದಲ್ಲಿ ಮತ್ತೊಂದು ಬದಲಾವಣೆ ಯುವಜನತೆಯ ಮೂಲಕ ಆಗಬೇಕಿದೆ ಎಂದು ಹೇಳಿದರು.
