ಉಡುಪಿ : ಅಬಕಾರಿ ಡಿಸಿಯ ನಕಲಿ ಸಹಿ, ಸೀಲು ಬಳಕೆ ಆರೋಪ – ದೂರು ದಾಖಲು – Vishwanews24

Featured, ಉಡುಪಿ

ಉಡುಪಿ : ಅಬಕಾರಿ ಡಿಸಿಯ ನಕಲಿ ಸಹಿ, ಸೀಲು ಬಳಕೆ ಆರೋಪ – ದೂರು ದಾಖಲು

ಉಡುಪಿ: ನಕಲಿ ಸಹಿ, ಸೀಲು ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಐರೋಡಿ ಗ್ರಾಮದಲ್ಲಿ ಹೊಂದಿರುವ ಸಿಎಲ್‌-2 ಸನ್ನದನ್ನು ಕೋಟೇಶ್ವರ ಗ್ರಾಮದ ಕಾಗೇರಿ ಎಂಬಲ್ಲಿಗೆ ಸ್ಥಳಾಂತರಿಸಲು ಅಬಕಾರಿ ಉಪ ಆಯುಕ್ತರು ಅನು ಮತಿ ನೀಡಿದ್ದು, ಈ ಸ್ಥಳಾಂತರ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಅಬಕಾರಿ ಆಯುಕ್ತರಿಗೆ ಸಲ್ಲಿಸಿದ ಆಕ್ಷೇಪಣೆಗೆ ಸಂಬಂಧಿಸಿದ ದಾಖಲೆ ಗಳಲ್ಲಿ ರಮೇಶ್‌ ದೇವಾಡಿಗ, ಸ್ವಸ್ತಿಕ್‌ ಹೆಗ್ಡೆ ಅವರು ಅಬಕಾರಿ ಡಿಸಿ ಅವರ ನಕಲಿ ಸಹಿ, ಇಲಾಖಾ ಕಚೇರಿ ಸೀಲುಗಳನ್ನು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ : ಉಡುಪಿ ಕ್ಷೇತ್ರದಲ್ಲಿ ಪ್ರಸಾದ್ ರಾಜ್ ಕಾಂಚನ್ ಗೆ ಟಿಕೆಟ್ – Vshwanews24

ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ : ಉಡುಪಿ ಕ್ಷೇತ್ರದಲ್ಲಿ ಪ್ರಸಾದ್ ರಾಜ್ ಕಾಂಚನ್ ಗೆ ಟಿಕೆಟ್ – Vshwanews24

Leave a Reply