ಉಡುಪಿ: ಅಮೆರಿಕದಲ್ಲಿ ಶಿರ್ವ ಮೂಲದ ವಿದ್ಯಾರ್ಥಿಯ ಗುಂಡಿಟ್ಟು ಹತ್ಯೆ – Vishwanews24

Featured, ಉಡುಪಿ

ಉಡುಪಿ: ಶಿರ್ವ ಮೂಲದ ಯುವಕನನ್ನು ಅಮೆರಿಕದ ಸ್ಯಾನ್‍ಬರ್ನಾಡಿಯೊ ಎಂಬ ಪ್ರದೇಶದಲ್ಲಿ ಗುಂಡಿಟ್ಟು ಹತ್ಯೆಗೈದ ದುರಂತ ಘಟನೆ ವರದಿಯಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್‌ ಬರ್ನಾರ್ಡ್‌ಡಿನೋ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ, ಅಭಿಷೇಕ್‌ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದಾರೆ.

ಶಿರ್ವ ಮೂಲದ ಮೈಸೂರು ಕುವೆಂಪು ನಗರ ನಿವಾಸಿ ಅಭಿಷೇಕ್‌ (25), ಈ ಹೊಟೆಲ್​ನಲ್ಲಿ ಲಾಡ್ಜಿಂಗ್​ ವ್ಯವಸ್ಥೆ ಇತ್ತು. ಅಲ್ಲಿಗೆ ಆಗಮಿಸಿದ್ದ ಗ್ರಾಹಕರೋರ್ವರು ಸಮಯ ಮುಗಿದರೂ ಉಳಿದುಕೊಂಡಿದ್ದರು. ಅವರ ಬಳಿ ಹೋಗಿ ರೂಂ ಖಾಲಿ ಮಾಡಿ ಎಂದು ಅಭಿಷೇಕ್​ ಹೇಳಿದ್ದ. ಅದಾದ ಬಳಿಕ ಅಮೆರಿಕ ಕಾಲಮಾನದಂತೆ ನ.28ರ ಮಧ್ಯಾಹ್ನ 12.30ಕ್ಕೆ ಅಭಿಷೇಕ್​ ಮತ್ತು ಗ್ರಾಹಕನ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ವೇಳೆ ಸಿಟ್ಟಿಗೆದ್ದ ಆ ಗ್ರಾಹಕ ಅಭಿಷೇಕ್​ ಹಣೆಗೆ ಗುಂಡು ಹೊಡೆದಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಪೊಲೀಸರು ಮತ್ತು ಸ್ಟೇಟ್ ಹೆಲ್ತ್ ಆಫೀಸರ್‌ಗಳ ತಂಡ ತನಿಖೆ ಕೈಗೊಂಡಿದೆ.

ಅಭಿಷೇಕ್ 2 ದಿನಗಳ ಹಿಂದೆ ಅವರ ತಂದೆಯ ಜೊತೆ ಫೋನಿನಲ್ಲಿ ಮಾತನಾಡಿದ್ದು, ನಂತರ ಘಟನೆ ನಡೆಯುವ 15 ನಿಮಿಷಕ್ಕೂ ಮುಂಚೆ ಮನೆಗೆ ಸಂದೇಶ ಕೂಡ ಕಳುಹಿಸಿದ್ದಾರೆ. ಇದಾದ 15 ನಿಮಿಷಕ್ಕೆ ಅವರು ಸಾವನ್ನಪ್ಪಿದ್ದಾರೆ.