ಉಡುಪಿ ಉಚ್ಚಿಲ ದಸರಾ: ಪ್ರತಿದಿನ ಗಣ್ಯರಿಂದ ಧಾರ್ಮಿಕ ಉಪನ್ಯಾಸ ಮತ್ತು ಪ್ರವಚನ – vishwanews24

Featured, ಉಡುಪಿ

 ಉಡುಪಿ ಉಚ್ಚಿಲ ದಸರಾ: ಪ್ರತಿದಿನ ಗಣ್ಯರಿಂದ ಧಾರ್ಮಿಕ ಉಪನ್ಯಾಸ ಮತ್ತು ಪ್ರವಚನ

ಕಾಪು, : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತಾಭಿಮಾನಿಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ 3ರಿಂದ ಅ.12ರ ವರೆಗೆ ಜರಗಲಿರುವ ಮೂರನೇ ವರ್ಷದ ಉಡುಪಿ ಉಚ್ಚಿಲ ದಸರಾ 2024ರ ಅಂಗವಾಗಿ ಶಾಲಿನಿ ಡಾ| ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಗಣ್ಯರಿಂದ ಧಾರ್ಮಿಕ ಉಪನ್ಯಾಸ ಮತ್ತು ಪ್ರವಚನ ನಡೆಯಲಿದೆ.

ಪ್ರತೀ ದಿನ ಪೂರ್ವಾಹ್ನ ಉದಯ ಪೂಜೆ, 9 ಗಂಟೆಗೆ ನಿತ್ಯ ಚಂಡಿಕಾಹೋಮ, 12 ಗಂಟೆಗೆ ನವದುರ್ಗೆಯರು ಮತ್ತು ಶಾರದಾ ಮಾತೆಗೆ ಮಹಾಮಂಗಳಾರತಿ, 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಭಜನ ಕಾರ್ಯಕ್ರಮ, ಸಂಜೆ 5.45ರಿಂದ 6.15ರ ವರೆಗೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ,
6.3000 ಉಪಾಹಾರ ವಿತರಣೆ, ರಾತ್ರಿ 7.30ಕ್ಕೆ ನವದುರ್ಗೆಯರು ಮತ್ತು ಶಾರದಾ ಮಾತೆಗೆ ಮಹಾಪೂಜೆ, 8 ರಿಂದ 8.10ರ ವರೆಗೆ ನವದುರ್ಗೆಯರ ಕುರಿತಾದ ಲೇಸರ್ ಶೋ, 8.30ಕ್ಕೆ ಕಲೋಕ್ತ ಪೂಜೆ ನಡೆಯಲಿದೆ.

ನವ ದುರ್ಗೆಯರ ಶಕ್ತಿ ಮುಂದಿನ 9 ವರ್ಷ ನಮ್ಮ ಸರ್ಕಾರದ ಮೇಲೆ ಇರುತ್ತದೆ ಎಂಬುದು ನನ್ನ ನಂಬಿಕೆ : ಡಿ.ಕೆ.ಶಿವಕುಮಾರ್ – vishwanews24

ಧಾರ್ಮಿಕ ಸಭೆಯಲ್ಲಿ ಅ. 3ರಂದು ಪ್ರೀತಿ ರೇಖಾ ಬ್ರಹ್ಮಾವರ ಅವರು ಆಧ್ಯಾತ್ಮ ಭಾರತ,  4ರಂದು ಅರ್ಪಿತಾ ಶೆಟ್ಟಿ ಕಟಪಾಡಿ ಅವರು ಯಂತ್ರ ನಾರ್ಯಸ್ತು ಪೂಜ್ಯಂತೇ, ಅ. 5ರಂದು ನಾಗಶ್ರೀ ತ್ಯಾಗರಾಜ ಎನ್. ಅವರು ಮಾತೃದೇವೋಭವ, ಅ. 6ರಂದು ಎನ್‌. ಆರ್. ದಾಮೋದರ್ ಶರ್ಮ ಅವರು ದುರ್ಗಾರಾಧನೆ, ಅ. 7ರಂದು ರಶ್ಮಿ ರ್ಪವದಿ ಅವರು ಭಕ್ತಿ ಬಾಳಿನ ಶಕ್ತಿ, ಅ. 8ರಂದು ವೇಲಾಪುರಿ ವಿಶ್ವನಾಥ ಶರ್ಮ ಅವರು ನರಹರನಾಗವೆಡೆಗೆ,
ಅ. 9ರಂದು ವಾರುಣಿ ನಾಗರಾಜ್‌ ಅವರು ಕರಾವಳಿಯ ದುರ್ಗಾ ದೇಗುಲಗಳು, ಅ. 10ರಂದು ಭಾಗ್ಯಶ್ರೀ ಐತಾಳ್ ಅವರು ಸಂಸಾರ-ಸಂಸ್ಕಾರ, ಅ. 11ರಂದು ರಖೀಬ್ ಕಣ್ಣಂಗಾರ್ ಅವರು ಜೀವನ ಪಾತ್ರೆಯಲ್ಲಿ ಪ್ರೀತಿಯ ದೇವರು ವಿಚಾರದಲ್ಲಿ ಉಪನ್ಯಾಸ ನೀಡಲಿದ್ದಾರೆ ಎಂದು ದ. ಕ. ಮೊಗವೀರ ಮಹಾಜನ ಸಂಘ, ಕ್ಷೇತ್ರಾಡಳಿತ ಸಮಿತಿ, ದಸರಾ ಸಮಿತಿ ಹಾಗೂ ಸಂಘ ಸಂಸ್ಥೆಗಳ ಪ್ರಕಟನೆ ತಿಳಿಸಿದೆ.

ಸಾವರ್ಕರ್ ಒಬ್ಬ ಬ್ರಾಹ್ಮಣ , ಮಾಂಸಾಹಾರ ಸೇವನೆ ಮಾಡುತ್ತಿದ್ದರು : ದಿನೇಶ್ ಗುಂಡೂರಾವ್ – vishwanews24

Leave a Reply