ಉಡುಪಿ: ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನಕ್ಕೆ ನೂತನ ಧ್ವಜಸ್ತಂಭ ಸಮರ್ಪಣೆ – Vishwanews24
ಉಡುಪಿ: ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನಕ್ಕೆ ನೂತನ ಧ್ವಜಸ್ತಂಭ ಸಮರ್ಪಣೆ – Vishwanews24
ಉಡುಪಿ: ಉಡುಪಿ ಕಡಿಯಾಳಿಯಲ್ಲಿನ ಇತಿಹಾಸ ಪ್ರಸಿದ್ಧ ದೇವಾಲಯವಾದ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನಕ್ಕೆ ನೂತನ ಧ್ವಜಸ್ತಂಭವ
ಸಮರ್ಪಿಸುವ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.
ಉಡುಪಿಯ ಜೋಡುಕಟ್ಟೆಯಲ್ಲಿ ವಾಹನದಲ್ಲಿ ಹೊತ್ತು ಕೊಂಡುಬರಲಾದ ನೂತನ ಧ್ವಜಸ್ತಂಭಕ್ಕೆ ವಿಶೇಷ ಪೂಜೆಯನ್ನು ನೆರವೇರಿಸುವುದರೊಂದಿಗೆ
ಮೆರವಣಿಗೆಯ ಮೂಲಕ ನಗರದ ಪ್ರಮುಖ ರಸ್ತೆಯ ಮುಖಾಂತರ ಸಾಗಿಬಂದ ಮೆರವಣಿಗೆಯು ದೇವಾಲಯಕ್ಕೆ ತಲುಪಿಸಲಾಯಿತು.

ಮೆರವಣಿಗೆಯಲ್ಲಿ ದೇವಾಲಯದ ಡಾ.ವಿ.ರವಿರಾಜ್ ಆಚಾರ್ಯ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ,
ಕೆ.ರಾಘವೇಂದ್ರ ಕಿಣಿ,ನಗರಸಭೆಯ ಅಧ್ಯಕ್ಷರಾದ ಸುಮಿತ್ರ ನಾಯಕ್, ಸ್ಥಾಯಿ ಸಮಿತಿಯ ಅಧ್ಯಕ್ಷ ಡಿ.ಬಾಲಕೃಷ್ಣ ಶೆಟ್ಟಿ,ಮಾಜಿ ಸಚಿವ ಪ್ರಮೋದ್
ಮಧ್ವರಾಜ್, ಜಿ.ಶಂಕರ್, ಸುಪ್ರಸಾದ್ ಶೆಟ್ಟಿ, ನಗರಸಭೆಯ ಸದಸ್ಯರಾದ ಪ್ರಭಾಕರ್ ಪೂಜಾರಿ, ಗಿರೀಶ್ ಅಂಚನ್, ಬಿ.ವಿಜಯ ರಾಘವ್ ರಾವ್,
ಜೀರ್ಣೋದ್ಧಾರ ಸಮಿತಿಯ ಸರ್ವಸದಸ್ಯರು, ಭಜನಾ ಮಂಡಳಿಗಳು, ಸ್ಥಳೀಯ ಎಲ್ಲಾ ಪ್ರಮುಖಕರು ಭಕ್ತರು ಹಾಜರಿದ್ದರು.
ಮಂಗಳೂರು: ಬೆರಳು ಮುದ್ರೆ ಘಟಕದ ಸಹಾಯಕ ಪೊಲೀಸ್ ಉಪನಿರೀಕ್ಷಕ ಕುಸಿದು ಬಿದ್ದು ಮೃತ್ಯು – Vishwanews24
