ಉಡುಪಿ: ಕರಾವಳಿ ಜನರ ಬೇಡಿಕೆಯಂತೆ ಇನ್ನು ಮುಂದೆ ಪಡಿತರ ಕುಚ್ಚಲಕ್ಕಿ ವಿತರಣೆ: ಸಚಿವ ಕೋಟ -Vishwanews24
ಉಡುಪಿ: ಕರಾವಳಿ ಜನರ ಬೇಡಿಕೆಯಂತೆ ಇನ್ನು ಮುಂದೆ ಪಡಿತರ ಕುಚ್ಚಲಕ್ಕಿ ವಿತರಣೆ: ಸಚಿವ ಕೋಟ -Vishwanews24
ಉಡುಪಿ: ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಕುಚ್ಚಲಕ್ಕಿಯನ್ನು ಪಡಿತರ ವ್ಯವಸ್ಥೆಯಡಿಯಲ್ಲಿ ವಿತರಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದ್ದಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರು ಪಡಿತರದ ಮೂಲಕ ಕುಚ್ಚಲ್ಲಕ್ಕಿಯನ್ನು ವಿತರಿಸುವಂತೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಬೇಡಿಕೆಯನ್ನು ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ನಾವು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೆವು.ಮನವಿ ಪುರಸ್ಕರಿಸಿದ ಕೇಂದ್ರವು ಉಭಯ ಜಿಲ್ಲೆಗಳಿಗೆ ವಿತರಿಸಲು ಲಕ್ಷ ಕ್ವಿಂಟಾಲ್ ನಷ್ಡು ಅಕ್ಕಿ ನೀಡಲು ಒಪ್ಪಿದೆ. ಇದಕ್ಕಾಗಿ ಕೇಂದ್ರ ಸರಕಾರ ಮತ್ತು ಸಂಬಂಧಪಟ್ಟ ಮಂತ್ರಿಗಳಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
