ಉಡುಪಿ: ಕೇರಳದ ಮಂಕಿಪಾಕ್ಸ್ ರೋಗಿಯ ಜೊತೆ ಪ್ರಯಾಣಿಸಿದ್ದ ಜಿಲ್ಲೆಯ 6 ಮಂದಿ ಕ್ವಾರಂಟೈನ್  : ಜಿಲ್ಲಾಧಿಕಾರಿ – Vishwanews24

Featured, ಉಡುಪಿ

ಉಡುಪಿ: ಕೇರಳದ ಮಂಕಿಪಾಕ್ಸ್ ರೋಗಿಯ ಜೊತೆ ಪ್ರಯಾಣಿಸಿದ್ದ ಜಿಲ್ಲೆಯ 6 ಮಂದಿ ಕ್ವಾರಂಟೈನ್  : ಜಿಲ್ಲಾಧಿಕಾರಿ

ಉಡುಪಿ: ಕೇರಳದಲ್ಲಿ ಪತ್ತೆಯಾದ ದೇಶದ ಮೊದಲ ಮಂಕಿಪಾಕ್ಸ್ ರೋಗಿಯ ಜೊತೆಗೆ ಪ್ರಯಾಣಿಸಿದವರಲ್ಲಿ ಉಡುಪಿ ಜಿಲ್ಲೆಯ ಸುಮಾರು 6 ಮಂದಿ ಕೂಡಾ ಇದ್ದು ಇವರನ್ನು ಇದೀಗ ನಿಗಾವಣೆಯಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಜಿಲ್ಲೆಯಲ್ಲಿ ಇದುವರೆಗೆ ಮಂಕಿಪಾಕ್ಸ್ ಸಂಬಂಧಿತ ಲಕ್ಷಣ ಇರುವ ಕುರಿತು ಮಾಹಿತ ಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಜಿಲ್ಲಾ ಆಸ್ಪತ್ರೆಯಲ್ಲೂ ಇದಕ್ಕಾಗಿ ಮುನ್ನೆಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಲಾಗಿದೆ. ಈ ವರೆಗೆ ಯಾರಲ್ಲೂ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದರು.

ಇದನ್ನೂ ಓದಿ : ಉಡಪಿ : ಪ್ರೊ. ಎಮ್. ಸುಧಾಕರ ರಾವ್ ನಿಧನ – Vishwanews24 

Leave a Reply