ಉಡುಪಿ: ಕೊರಗರ ಮೇಲೆ ದೌರ್ಜನ್ಯ ಪ್ರಕರಣ; ಪೊಲೀಸರ ಜಾಮೀನು ಅರ್ಜಿ ವಜಾ – Vishwanews24

Featured, ಉಡುಪಿ

ಉಡುಪಿ: ಕೊರಗರ ಮೇಲೆ ದೌರ್ಜನ್ಯ ಪ್ರಕರಣ; ಪೊಲೀಸರ ಜಾಮೀನು ಅರ್ಜಿ ವಜಾ – Vishwanews24

ಕೋಟ: ಕೋಟತಟ್ಟು ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳಾದ ಪಿಎಸ್‌ಐ ಹೆಡ್ ಕಾನ್‌ಸ್ಟೇಬಲ್ ಸೇರಿ ದಂತೆ 7 ಮಂದಿ ಪೊಲೀಸರ ನಿರೀಕ್ಷಣ ಜಾಮೀನು ಅರ್ಜಿಯನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.

ಕೋಟತಟ್ಟು ಗ್ರಾಮದಲ್ಲಿ ಡಿ. 27ರಂದು ರಾಜೇಶ್ ಅವರ ಮದುವೆ ಮೆಹಂದಿಯಲ್ಲಿ ದೌರ್ಜನ್ಯ ನಡೆದಿದೆ ಎಂದು ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧ ಪಟ್ಟಂತೆ ಜ. 3ರಂದು ಪೊಲೀಸರು ನಿರೀಕ್ಷಣ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ರವೀಂದ್ರ ಜೋಶಿ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ.

ಕಾಪು ಮಹತೋಭಾರ ಶ್ರಿ ಲಕ್ಷ್ಮೀ ಜನಾರ್ದನ ದೇವಸ್ಥಾನ ವಾರ್ಷಿಕ ಮಹೋತ್ಸವ : ವೈಭವದ ಶ್ರೀ ಮನ್ಮಹಾರಥೋತ್ಸವ – Vishwanews24 https://www.vishwanews24.com/?p=55313

Leave a Reply