ಉಡುಪಿ ಚಿಕ್ಕಮಗಳೂರು ಅಮೃತ್ ಶೆಣೈ ಪರ ಹೆಚ್ಚಿದ ಒಲವು,ಚಲನಚಿತ್ರ ನಿರ್ದೇಶಕ ಕೃಷ್ಣಪ್ಪ ಉಪ್ಪೂರು ಶೆಣೈ ಪರ ಬ್ಯಾಟಿಂಗ್.

Featured, ಉಡುಪಿ
ಉಡುಪಿ : ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಮೃತ್ ‌ಶೆಣೈಯವರ ಪರ ಪ್ರಚಾರ ಭಾಷಣ ಕಳಸದಲ್ಲಿ ನಡೆಯಿತು ,ಕಾರ್ಕಳ‌ ಕ್ಷೇತ್ರದ ಸಮಾಜ ಸೇವಕಿ ಅನಿತಾ ಡಿಸೋಜ ಮಾತನಾಡುತ್ತಾ ಶೆಣೈಯವರ ವ್ಯಕ್ತಿತ್ವವನ್ನು ವಿವರಿಸಿದರು ಅಭಿವೃದ್ಧಿಯಬಗ್ಗೆ ಅವರಲ್ಲಿದ್ದ ಗಾಢವಾದ ಜ್ಞಾನ ಹಾಗೂ ಅವರ ಬಧ್ದತೆಯನ್ನು ವಿವರಿಸಿದರು ,ಉಡುಪಿಯ ಚಲನಚಿತ್ರ ನಿರ್ದೇಶಕ ಕೃಷ್ಣಪ್ಪ ಉಪ್ಪೂರು ಅಮೃತ್ ರವರು ಯಾರ ಬಗ್ಗೆಯೂ ಟೀಕೆ ಮಾಡದೆ ಪ್ರಚಾರ ಮಾಡುವ ಅಪರೂಪದ ವ್ಯಕ್ತಿ ಎಂದು ಕೊಂಡಾಡಿದರು ,ಶೋಭಾ ಹಾಗೂ ಪ್ರಮೋದ್ ಇಬ್ಬರಿಗೂ ಈಗಾಗಲೇ ದೇವರು ಹಲವು ಬಾರಿ ಅವಕಾಶ ಅಧಿಕಾರ ನೀಡಿದ್ದಾರೆ ಅವರನ್ನು ಹತ್ತಿರದಿಂದ ನೋಡಿದ್ದೇವೆ  ಶೆಣೈಯವರು ಅಧಿಕಾರ ಇಲ್ಲದೇ ಇಷ್ಟು ಸೇವೆ ಮಾಡಿದ್ದಾರೆ ಒಂದು ಅವಕಾಶ ಅವರಿಗೆ ನೀಡುವುದು ನಮ್ಮ ಕರ್ತವ್ಯ ಎಂದರು ,ಕಲೀಲ್ ಕೆರಾಡಿ ಮಾತನಾಡಿ ರ  ಪ್ರಮೋದ್ ಜೆಡಿಎಸ್ ನಿಂದ ಸ್ಪರ್ಧೆ ‌ಮಾಡುವುದು ಸಮರ್ಥನೀಯ ಅಲ್ಲಾ ಶೆಣೈಯವರ ದಿಟ್ಟ ನಿರ್ಧಾರಕ್ಕೆ ನಮ್ಮ ಸ್ವಯಂ ಸ್ಪೂರ್ತಿ ಯ ಬೆಂಬಲ ಎಂದರು
ಜಯಶ್ರೀ ಭಟ್ ಸ್ವಾಗತಿಸಿದರು ಅಭ್ಯರ್ಥಿ ಅಮೃತ್ ಶೆಣೈ ಅಂಗಡಿಗಳಿಗೆ ತೆರಳಿ ಕಳಸ ಪೇಟೆಯಲ್ಲಿ ಮತಯಾಚನೆ ಮಾಡಿದರು ತರಿಕೆರೆಯಿಂದ ವರದರಾಜ ಮತ್ತು ತಂಡ ,ಚಿಕ್ಕಮಗಳೂರಿನಿಂದ ಹನೀಫ್ , ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.