ಉಡುಪಿ ಜಿಲ್ಲಾಕಾಂಗ್ರೆಸ್ ಸೇವಾದಳದ ಕಾರ್ಯಕಾರಿ ಸಮಿತಿ ಸಭೆ – Vishwanews24
ಉಡುಪಿ ಜಿಲ್ಲಾಕಾಂಗ್ರೆಸ್ ಸೇವಾದಳದ ಕಾರ್ಯಕಾರಿ ಸಮಿತಿ ಸಭೆ – Vishwanews24
ಉಡುಪಿ ಜಿಲ್ಲಾಕಾಂಗ್ರೆಸ್ ಸೇವಾದಳದ ಕಾರ್ಯಕಾರಿ ಸಮಿತಿಯ ಸಭೆಯುಕಾಂಗ್ರೆಸ್ ಭವನದಲ್ಲಿಜರಗಿತು.ಸಭಾಧ್ಯಕ್ಷತೆಯನ್ನುವಹಿಸಿದ್ದ ಜಿಲ್ಲಾ ಸೇವಾದಳದ ಅಧ್ಯಕ್ಷರಾದ ಶ್ರೀ ಕಿಶೋರ್ಕುಮಾರ್ ಎರ್ಮಾಳ್ಅವರು ಸರ್ವರನ್ನೂ ಸ್ವಾಗತಿಸಿದರು.
ಉಡುಪಿ ಜಿಲ್ಲಾಕಾಂಗ್ರೆಸ್ಅಧ್ಯಕ್ಷರಾದ ಶ್ರೀ ಅಶೋಕ್ಕುಮಾರ್ಕೊಡವೂರುರವರು ಮಹಾತ್ಮಾಗಾಂಧೀಜಿಯವರ ಭಾವಚಿತ್ರಕ್ಕೆ ಖಾದಿ ಹಾರವನ್ನು ಹಾಕುವ ಮೂಲಕ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ೧೯೨೩ರಲ್ಲಿ ಪ್ರಾರಂಭವಾದರಾಷ್ಟಿçÃಯ ಸೇವಾದಳ, ಕಾಂಗ್ರೆಸ್ ಸೇವಾದಳವಾಗಿ ಮಾರ್ಪಾಡಾಗಿ ಪ್ರಾಮಾಣಿಕವಾಗಿಜನಸೇವೆ ಮಾಡುವವರನ್ನು ಮಾತ್ರ ಸೇರಿಸಿಕೊಂಡು ನಿಷ್ಠೆ, ಸರಳತೆಯಿಂದ ದುಡಿಯುವವರ ಸಂಘಟನೆಇದು. ಅಧಿಕಾರದಾಸೆಯಿಂದ ಬರುವವರಿಗೆಇಲ್ಲಿ ಸ್ಥಾನ ಇಲ್ಲ. ರಾಷ್ಟçಪ್ರೇಮ, ಕಾಂಗ್ರೆಸ್ ತತ್ವಗಳ ಅನುಷ್ಟಾನ ಇದರಗುರಿ.ಕಾಂಗ್ರೆಸ್ನ ಮುಂಚೂಣಿ ಘಟಕಗಳಲ್ಲಿ ಪ್ರಮುಖವಾದದ್ದು ಸೇವಾದಳ ಎಂದು ಹೇಳಿದರು.
ಸಭೆಯಲ್ಲಿ ಸದಸ್ಯರಅಭಿಪ್ರಾಯ ಮಂಡಿಸಲಾಗಿ ಪರಿಹಾರೋಪಾಯವನ್ನುದಾಖಲಿಸಲಾಯಿತು.ಸೇವಾದಳವನ್ನು ಬಲಪಡಿಸುವ ನಿರ್ಧಾರ ಕೈಗೊಳ್ಳಲಾಯಿತು.ಉಡುಪಿ ಜಿಲ್ಲಾಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕೆ.ಅಣ್ಣಯ್ಯ ಸೇರಿಗಾರ್, ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿಶರತ್ ನಾಯ್ಕ್, ಕುಮಾರ್ಖಾರ್ವಿ, ಪ್ರಕಾಶ್ಆಚಾರ್ಯ, ಲಕ್ಷ್ಮೀ ನಾಯ್ಕ್, ಅರುಣ್ ಬಿ.ಕೆ.,ಧರ್ಮಪ್ರಕಾಶ್, ಜ್ಯೋತಿಕುಂದಾಪುರ, ಅಬ್ದುಲ್ಲಾ ಶೇಕ್ಆದಮ್,ರಾಜೇಶ್ ಮೆಂಡನ್, ಮೋಹನ್ ಸುವರ್ಣ, ಹುಸೈನ್ ಹಾಗೂ ಲಕ್ಷ್ಮೀಶ್ ಶೆಟ್ಟಿ, ಬ್ಲಾಕ್ ಮಹಿಳಾ ಕಾಂಗ್ರೆಸ್ನಗ್ರಾಯತ್ರಿ ಮೊದಲಾದವರು ಉಪಸ್ಥಿತರಿದ್ದರು.ಸೇವಾದಳದ ನೂತನ ಬ್ಲಾಕ್ಅಧ್ಯಕ್ಷರನ್ನು ಈ ಸಂದರ್ಭ ಘೋಷಿಸಲಾಯಿತು.ಕೊನೆಯಲ್ಲಿ ಬ್ರಹ್ಮಾವರ ಬ್ಲಾಕ್ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಉಮೇಶ್ ಪೂಜಾರಿಯವರು ವಂದಿಸಿದರು.
