ಉಡುಪಿ: ಜಿಲ್ಲೆಯಲ್ಲಿ 97,706 ಮತದಾರರ ವಿವರಗಳಲ್ಲಿ ವ್ಯತ್ಯಾಸಗಳು ಪತ್ತೆ – vishwanews24

Featured, ಉಡುಪಿ

ಉಡುಪಿ: ಜಿಲ್ಲೆಯಲ್ಲಿ 97,706 ಮತದಾರರ ವಿವರಗಳಲ್ಲಿ ವ್ಯತ್ಯಾಸಗಳು ಪತ್ತೆ

ಉಡುಪಿ: ಹಿಂದಿನ ಮತದಾರರ ಪಟ್ಟಿಯೊಂದಿಗೆ ಮತದಾರರ ವಿವರಗಳನ್ನು ಜೋಡಿಸಲು ಸಾಧ್ಯವಾಗದ 31,903 ಪ್ರಕರಣಗಳು ಹಾಗೂ ಲಿಂಕ್ ಮಾಡುವ ಪ್ರಕ್ರಿಯೆಯ ನಂತರದ ಪರಿಶೀಲನೆಯಲ್ಲಿ ಹೆಸರು ಹೊಂದಾಣಿಕೆಯಂತಹ ತಾರ್ಕಿಕ ವ್ಯತ್ಯಾಸಗಳು ಕಂಡುಬಂದ 65,803 ಪ್ರಕರಣಗಳು ಉಡುಪಿ ಜಿಲ್ಲೆಯಲ್ಲಿ ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.

ಆಗಸ್ಟ್ 24ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, “ಆಕ್ಷೇಪಣೆ ಸಲ್ಲಿಸಲು ಸೆ.23ರ ವರೆಗೆ ಅವಕಾಶವಿದೆ. ದಾಖಲೆ ನೀಡಿದ, ಹೆಸರು ಹೊಂದಾಣಿಕೆಯಾಗದ ಮತದಾರರ ಹೆಸರು ಕರಡು ಪಟ್ಟಿಯಲ್ಲಿದೆ” ಎಂದು ಹೇಳಿದರು.

ಉಡುಪಿ: ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ ; ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಇನ್ನೂ ಪತ್ತೆಯಾಗಿಲ್ಲ: ಹರಿರಾಮ್ ಶಂಕರ್  – vishwanews24

“ನಿಯಮಾನುಸಾರ, ಸಂಬಂಧಪಟ್ಟ ಮತದಾರರ ನೋಂದಣಿ ಅಧಿಕಾರಿಗಳು (ERO) ಇಂತಹ ಪ್ರಕರಣಗಳಲ್ಲಿ ಮತದಾರರಿಗೆ ನೋಟಿಸ್ ಜಾರಿ ಮಾಡಲಿದ್ದಾರೆ. ಅಗತ್ಯವಿದ್ದಲ್ಲಿ, EROಗಳು ಸ್ವಯಂಪ್ರೇರಿತವಾಗಿಯೂ ನೋಟಿಸ್ ಜಾರಿ ಮಾಡಬಹುದು. ಈ ಮೂಲಕ ಸಂಬಂಧಪಟ್ಟ ಮತದಾರರಿಗೆ ತಮ್ಮ ಹಕ್ಕು ಅಥವಾ ಹಕ್ಕುದಾವೆಯನ್ನು ಸಮರ್ಥಿಸಿಕೊಳ್ಳಲು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ” ಎಂದರು.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 97,706 ಪ್ರಕರಣಗಳು ಪತ್ತೆಯಾಗಿವೆ. ಕ್ಷೇತ್ರವಾರು ವಿವರಗಳು ಹೀಗಿವೆ:

118-ಬೈಂದೂರು: ಲಿಂಕ್ ಆಗದ 3,891 ಪ್ರಕರಣಗಳು ಹಾಗೂ ತಾರ್ಕಿಕ ವ್ಯತ್ಯಾಸ/ಅಸಂಗತತೆ ಹೊಂದಿರುವ 11,275 ಪ್ರಕರಣಗಳು ಸೇರಿದಂತೆ ಒಟ್ಟು 15,166 ಪ್ರಕರಣಗಳು.

119-ಕುಂದಾಪುರ: ಲಿಂಕ್ ಆಗದ 4,233 ಪ್ರಕರಣಗಳು ಹಾಗೂ ತಾರ್ಕಿಕ ವ್ಯತ್ಯಾಸ/ಅಸಂಗತತೆ ಹೊಂದಿರುವ 6,945 ಪ್ರಕರಣಗಳು ಸೇರಿದಂತೆ ಒಟ್ಟು 11,178 ಪ್ರಕರಣಗಳು.

120-ಉಡುಪಿ: ಲಿಂಕ್ ಆಗದ 13,255 ಪ್ರಕರಣಗಳು ಹಾಗೂ ತಾರ್ಕಿಕ ವ್ಯತ್ಯಾಸ/ಅಸಂಗತತೆ ಹೊಂದಿರುವ 23,499 ಪ್ರಕರಣಗಳು ಸೇರಿದಂತೆ ಒಟ್ಟು 36,754 ಪ್ರಕರಣಗಳು.

121-ಕಾಪು: ಲಿಂಕ್ ಆಗದ 5,971 ಪ್ರಕರಣಗಳು ಹಾಗೂ ತಾರ್ಕಿಕ ವ್ಯತ್ಯಾಸ/ಅಸಂಗತತೆ ಹೊಂದಿರುವ 14,850 ಪ್ರಕರಣಗಳು ಸೇರಿದಂತೆ ಒಟ್ಟು 20,821 ಪ್ರಕರಣಗಳು.

122-ಕಾರ್ಕಳ: ಲಿಂಕ್ ಆಗದ 4,553 ಪ್ರಕರಣಗಳು ಹಾಗೂ ತಾರ್ಕಿಕ ವ್ಯತ್ಯಾಸ/ಅಸಂಗತತೆ ಹೊಂದಿರುವ 9,234 ಪ್ರಕರಣಗಳು ಸೇರಿದಂತೆ ಒಟ್ಟು 13,787 ಪ್ರಕರಣಗಳು.

ವಿಷಕಾರಿ ದತ್ತೂರ ಬೀಜ ಮಾರಾಟ : ಅಮೆಜಾನ್,ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ನ ಆಹಾರ ಪರವಾನಗಿ ಅಮಾನತು – vishwanews24

ಮತದಾರರ ವಿಚಾರಣೆ ಪ್ರಕ್ರಿಯೆಗೆ ಅನುಕೂಲವಾಗುವಂತೆ ಹೆಚ್ಚುವರಿ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳನ್ನು (AERO) ನೇಮಿಸಲಾಗಿದೆ. ನೋಟಿಸ್‌ಗಳಿಗೆ ಸಂಬಂಧಿಸಿದ ವಿಚಾರಣೆಗಳನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳು ಅಥವಾ ನಗರ ವಾರ್ಡ್‌ಗಳಲ್ಲಿಯೇ ನಡೆಸಲು ಆಡಳಿತ ಕ್ರಮ ಕೈಗೊಂಡಿದೆ. ಇದರಿಂದ ಮತದಾರರು ಸುಲಭವಾಗಿ ವಿಚಾರಣೆಯಲ್ಲಿ ಭಾಗವಹಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಉಪಸ್ಥಿತರಿದ್ದರು.

Leave a Reply