ಉಡುಪಿ :ನಾವ್ಯಾರು ಹಲಾಲ್ ಗಲಾಟೆಗೆ ಪ್ರೇರೇಪಿಸಿಲ್ಲ , ಈ ಗಲಾಟೆ ಕೊನೆ ಆಗಬೇಕು ಎಂಬ ಆಸೆ ನನಗೂ ಇದೆ : ರಘುಪತಿ ಭಟ್ – Vishwanews24
ಹಿಂದುಗಳ ಭಾವನೆ ಕೆರಳಿಸಿದ್ದಾರೆ , ನಾವ್ಯಾರು ಹಲಾಲ್ ಗಲಾಟೆಗೆ ಪ್ರೇರೇಪಿಸಿಲ್ಲ : ರಘುಪತಿ ಭಟ್ – Vishwanews24
ಉಡುಪಿ: ಭಟ್ಕಳದಲ್ಲಿ ಹಿಂದೆ ಹಿಂದುಗಳ ಅಂಗಡಿಗಳನ್ನು ಮುಸ್ಲಿಂಮರು ಬಂದ್ ಮಾಡಿಸಿದರು. ನಾವ್ಯಾರು ಈ ಗಲಾಟೆಗೆ ಪ್ರೇರೇಪಿಸಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮಕ್ಕಳ ತಲೆ ಹಾಳು ಮಾಡಿದ್ದಾರೆ, ಹಿಂದುಗಳ ಭಾವನೆ ಕೆರಳಿಸಿದ್ದಾರೆ. ಈಗ ಹಿಂದು ಜಾಗೃತನಾಗಿದ್ದಾನೆ. ಈ ಗಲಾಟೆ ಕೊನೆ ಆಗಬೇಕು ಎಂಬ ಆಸೆ ನನಗೂ ಇದೆ ಎಂದರು.
ಇನ್ನು ಉಡುಪಿ ಸೌಹಾರ್ದಯುತ ಜಿಲ್ಲೆ. ಹಲಾಲ್ ಅಂಗಡಿಗಳನ್ನು ಮುಚ್ಚಬಾರದು, ಆದರೆ ಹಲಾಲ್ ಮಾಂಸ ತಿನ್ನುವುದು ಬೇಡ. ಈಗ ಸರಕಾರಿ ಬಾಲಕಿಯರ ಕಾಲೇಜು ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಒಮ್ಮೆ ಸುಪ್ರೀಂ ಕೋರ್ಟ್ ತೀರ್ಪು ಬಂದ ಮೇಲೆ ಎಲ್ಲವೂ ಒಂದು ಶಾಂತಿಯುತ ಸ್ಥಿತಿಗೆ ಬರಬಹುದು ಎಂಬ ಭಾವನೆ ಎಂದು ಹೇಳಿದ್ದಾರೆ.
ಉಡುಪಿ: ಅಸೋಡು ನಂದಿಕೇಶ್ವರ ದೇವಳದಲ್ಲಿ ಹಿಂದುಯೇತರರಿಗೆ ವ್ಯಾಪಾರ ನಿರ್ಬಂಧಕ್ಕೆ ಸಂಘಟನೆಗಳ ಒತ್ತಾಯ – Vishwanews24
