ಉಡುಪಿ : ನಿಟ್ಟೂರು ಪ್ರೌಢಶಾಲೆಯಲ್ಲಿ ಶ್ರೀ ಪಿ.ಎಲ್. ಅಣ್ಣಾಜಿ ರಾವ್ ಸ್ಮಾರಕ ಧರ್ಮನಿಧಿ ಬೆಂಗಳೂರು, ವಿದ್ಯಾರ್ಥಿವೇತನ ವಿತರಣೆ – Vishwanews24

Featured, ಉಡುಪಿ

ಉಡುಪಿ : ನಿಟ್ಟೂರು ಪ್ರೌಢಶಾಲೆಯಲ್ಲಿ ಶ್ರೀ ಪಿ.ಎಲ್. ಅಣ್ಣಾಜಿ ರಾವ್ ಸ್ಮಾರಕ ಧರ್ಮನಿಧಿ ಬೆಂಗಳೂರು, ವಿದ್ಯಾರ್ಥಿವೇತನ ವಿತರಣೆ – Vishwanews24

ಉಡುಪಿ : ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವAತ ವಿದ್ಯಾರ್ಥಿಗಳಿಗೆ ಶ್ರೀ ಪಿ.ಲ್. ಅಣ್ಣಾಜಿ ರಾವ್ ಸ್ಮಾರಕ ಧರ್ಮನಿಧಿಯಿಂದ ವಿದ್ಯಾರ್ಥಿ ವೇತನವನ್ನು ವಿತರಿಸುವ ಕಾರ್ಯಕ್ರಮ ಜರಗಿತು. ಕಳೆದ ೧೦ವರ್ಷಗಳಿಂದ ಶ್ರೀ ಪಿ.ಎಲ್. ಅಣ್ಣಾಜಿ ರಾವ್ ಅವರ ಪುತ್ರ ಶ್ರೀ ಪಿ.ಎಲ್. ರಾವ್ ಶಾಲೆಯ ಆಯ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದಿದ್ದು, ಈ ಬಾರಿ ೩೦ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ವಿದ್ಯಾರ್ಥಿವೇತನ ನೀಡಲಾಯಿತು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮತ್ತು ನಿಕಟಪೂರ್ವ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ವಿದ್ಯಾರ್ಥಿವೇತನವನ್ನು ವಿತರಿಸಿ,
ವಿದ್ಯಾರ್ಥಿಗಳು ಈ ಧನಸಹಾಯದ ಸದುಪಯೋಗ ಪಡೆದುಕೊಳ್ಳಬೇಕು, ಈ ನಿಟ್ಟಿನಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವ ಶ್ರೀ ಪಿ.ಎಲ್. ಅಣ್ಣಾಜಿ ರಾವ್ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು. ಶಾಲಾ ಮುಖ್ಯೋಪಾಧ್ಯಾಯಿನಿ ಅನಸೂಯ ಕಾರ್ಯಕ್ರಮದ
ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಎಚ್.ಎನ್. ಶೃಂಗೇಶ್ವರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳ ಪೋಷಕರು ಈ ಸಂದರ್ಭದಲ್ಲಿ
ಉಪಸ್ಥಿತರಿದ್ದರು.

ಕಾರ್ಕಳ: ಆಗುಂಬೆಯಲ್ಲಿ ಭೀಕರ ಅಪಘಾತ : 4 ಮಂದಿ ದಾರುಣ ಸಾವು, ಐವರು ಗಂಭೀರ – VIshwanews24