ಉಡುಪಿ:  ಫೇಸ್‌ಬುಕ್‌ ಲೋನ್‌ – ಸಾಲ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ – Vishwanews24

Featured, ಉಡುಪಿ

ಉಡುಪಿ:  ಫೇಸ್‌ಬುಕ್‌ ಲೋನ್‌ – ಸಾಲ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ

ಉಡುಪಿ: ಸಾಲ ಪಡೆಯಲು ಮುಂದಾಗಿದ್ದ ವ್ಯಕ್ತಿಗೆ ವಂಚಕರು 4.9 ಲಕ್ಷ ರೂಪಾಯಿ ವಂಚಿಸಿದ ಘಟನೆ ವರದಿಯಾಗಿದೆ.

ಸಾಲದ ಅಗತ್ಯವಿದ್ದ ಗಿರೀಶ್ ಆಚಾರ್ಯ ಅವರು ಫೇಸ್‌ಬುಕ್‌ನಲ್ಲಿ ಬಜಾಜ್ ಸಾಲದ ಜಾಹೀರಾತಿಗೆ ಪ್ರತಿಕ್ರಿಯೆಯಾಗಿ ತಮ್ಮ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದರು.

ಫೆಬ್ರವರಿ 27ರಂದು ಓರ್ವ ಅಪರಿಚಿತ ಅವರಿಗೆ ದೂರವಾಣಿ ಕರೆ ಮಾಡಿ ಅವರು ಬಜಾಜ್ ಲೋನ್‌ಗೆ ಸೇರಿದವರಾದಿದ್ದು, ಮತ್ತು ಸಾಲವನ್ನು ನೀಡುವುದಾಗಿ ಭರವಸೆ ನೀಡಿದ್ದರು.

ಉಡುಪಿಯ ಶ್ರೀಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು, ಮುಸಲ್ಮಾನ ರಾಜರು :  ಮಿಥುನ್ ರೈ  – Vishwanews24

ಈ ನಡುವೆ ಗಿರೀಶ್ ಆಚಾರ್ಯ ಅವರು ಮಾರ್ಚ್ 1ರಿಂದ ಮಾರ್ಚ್ 3ರ ನಡುವೆ ಹಂತಹಂತವಾಗಿ ಒಟ್ಟು 4,09,167 ರೂ.ಗಳನ್ನು ಆರೋಪಿಯ ವಿವಿಧ ಬ್ಯಾಂಕ್ ಖಾತೆಗಳಿಗೆ ವಿವಿಧ ಕಾರಣಗಳಿಗಾಗಿ ಪಾವತಿಸಿದ್ದರು. ಆರೋಪಿಗಳು ಗಿರೀಶ್ ಆಚಾರ್ಯ ಅವರಿಗೆ ಸಾಲವನ್ನು ಪಾವತಿಸಿಲ್ಲ ಅಥವಾ ಪಾವತಿಸಿದ ಹಣ ಮರುಪಾವತಿ ಮಾಡಿಲ್ಲ.

ಈ ಸಂಬಂಧ ಸೇನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2023 ಕಲಂ 66 (C ) ಮತ್ತು 66 (D ) IT Act ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಉಡುಪಿ : ಕಣ್ಮಣ ಸೆಳೆಯುವಂತೆ ಸಿಂಗಾರಗೊಳ್ಳುತ್ತಿವೆ ಮತಗಟ್ಟೆಗಳು – Vishwanews24

Leave a Reply