ಉಡುಪಿ : ಬಾಕಿಯಿರುವ ಹಣ ನೀಡದ ಹಿನ್ನಲೆ ಸ್ನೇಹಿತನನ್ನು ಬಾವಿಗೆ ನೂಕಿ ಹತ್ಯೆ -Vishwanews24

Featured, ಉಡುಪಿ

ಉಡುಪಿ : ಹಣಕ್ಕಾಗಿ ದ್ವೇಷದಿಂದ ಸ್ನೇಹಿತನನ್ನು ಬಾವಿಗೆ ನೂಕಿ ಹತ್ಯೆಗೈದ ಘಟನೆ ಮಂದಾರ್ತಿ ಸಮೀಪದ ಹೆಗ್ಗುಂಜೆ ಗ್ರಾಮದ ಪಡುಕೋಮೆ ನಿರ್ಜೆಡ್ಡು ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ನಿರ್ಜೆಂಡ್ಡುವಿನ ಮನೋಜ್‌ (21) ಎಂದು ಗುರುತಿಸಲಾಗಿದೆ.

ಹತ್ಯೆ ಮಾಡಿದ ಆರೋಪಿ ನಿರ್ಜೆಂಡ್ಡುವಿನ ಸುನಿಲ್‌ ಶೆಟ್ಟಿ (21) ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ.

೨ ವರ್ಷಗಳ ಹಿಂದೆ ಮನೋಜ್‌ ಸುನಿಲ್‌ನಿಂದ 2,500 ರೂಪಾಯಿ ಹಣ ಪಡೆದಿದ್ದು ಅದನ್ನು ವಾಪಾಸ್‌ ಮಾಡಿರಲಿಲ್ಲ. ಫೋನ್‌ ಮಾಡಿದರೂ ಉತ್ತರಿಸುವುದಿಲ್ಲ ಎಂಬ ಕಾರಣಕ್ಕಾಗಿ ಮನೆಯವರಲ್ಲಿ ಸುನಿಲ್‌ ಗಲಾಟೆ ಮಾಡಿದ್ದನು.

ಈ ಸಂದರ್ಭದಲ್ಲಿ ಮನೆಯೊಳಗೆ ಮಲಗಿದ್ದ ಮನೋಜ್‌ ಹೊರಗೆ ಬಂದು ಹಣ ನೀಡುವುದಾಗಿ ಹೇಳಿದರೂ ಸುನಿಲ್ ಶೆಟ್ಟಿ ಈ ಕೂಡಲೇ ಹಣ ನೀಡಬೇಕು ಎಂದು ಪಟ್ಟುಹಿಡಿದನು. ಮನೋಜ್‌ ಹಲ್ಲು ಉಜ್ಜಲೆಂದು ಬಾವಿ ಕಟ್ಟೆಗೆ ಹೋದ ಸಂದರ್ಭದಲ್ಲಿ ಸುನಿಲ್‌ ಶೆಟ್ಟಿ ಕೂಡಾ ಅಲ್ಲಿಗೆ ಹೋಗಿದ್ದು ಸ್ವಲ್ಪ ಹೊತ್ತಿನಲ್ಲೇ ಸುನಿಲ್‌ ಶೆಟ್ಟಿ ಮನೋಜ್‌ ತಾಯಿ ರಾಧಾಬಾಯಿಗೆ ನಿಮ್ಮ ಪುತ್ರ ಬಾವಿಗೆ ಬಿದ್ದಿದ್ದಾನೆ ಎಂದು ಹೇಳಿ ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಾಕಿಯಿರುವ ಹಣ ನೀಡದ ಹಿನ್ನಲೆಯಲ್ಲಿ ದ್ವೇಷದಿಂದ ಸುನಿಲ್‌ ಶೆಟ್ಟಿ ನನ್ನ ಪುತ್ರನನ್ನು ಬಾವಿಗೆ ದೂಡಿ ಹತ್ಯೆ ಮಾಡಿದ್ದಾನೆ ಎಂದು ರಾಧಾಬಾಯಿ ನೀಡಿದ ದೂರಿದ್ದಾರೆ.

ಈ ಕುರಿತಂತೆ ಬ್ರಹ್ಮಾವರ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿದೆ.